Advertisement

Watch Theft: 100 ರೂ. ವಾಚು ಕದ್ದ ಆರೋಪ… ಬಾಲಕನ ಬೆನ್ನಿಗೆ ಉಗುಳಿ ಥಳಿಸಿದ ಮದರಸಾ ಶಿಕ್ಷಕ

01:14 PM Mar 01, 2024 | Team Udayavani |

ಔರಂಗಾಬಾದ್: ನೂರು ರೂಪಾಯಿ ಮೌಲ್ಯದ ವಾಚು ಕದ್ದಿರುವ ಆರೋಪದ ಮೇಲೆ ಹದಿನಾರು ವರ್ಷದ ಬಾಲಕನಿಗೆ ಮದರಸಾದ ಶಿಕ್ಷಕನೊಬ್ಬ ಬಾಲಕನ ಬೆನ್ನಿಗೆ ಉಗುಳಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಮಹಾರಾಷ್ಟ್ರದ ಮದರಸಾವೊಂದರಲ್ಲಿ ನಡೆದಿದೆ.

Advertisement

ಏನಿದು ಪ್ರಕರಣ:
ಇತ್ತೀಚಿಗೆ ಬಾಲಕನೊಬ್ಬನನ್ನು ಆತನ ಪೋಷಕರು ಸೂರತ್‌ನ ಔರಂಗಾಬಾದ್‌ನ ಜಾಮಿಯಾ ಬುರ್ಹಾನುಲ್ ಉಲೂಮ್ ಮದರಸಾಕ್ಕೆ ಸೇರಿಸಿದ್ದರು, ಕಳೆದ ಕೆಲ ದಿನಗಳ ಹಿಂದೆ ಈ ಮದರಸಾ ಬಳಿಯ ಅಂಗಡಿಯೊಂದರಲ್ಲಿ ವಾಚು ಕಾಳವಾಗಿರುವ ಘಟನೆ ನಡೆದಿದೆ ಈ ಕುರಿತು ಅಂಗಡಿ ಮಾಲೀಕ ಇಲ್ಲಿನ ಮದರಸಾದ ವಿದ್ಯಾರ್ಥಿಗಳೇ ವಾಚು ಕದ್ದಿರುವುದಾಗಿ ಹೇಳಿಕೊಂಡಿದ್ದಾರೆ ಅಲ್ಲದೆ ಠಾಣೆಗೆ ದೂರು ನೀಡುವ ನಿರ್ಧಾರಕ್ಕೆ ಬಂದಿದ್ದಾನೆ ಈ ವಿಚಾರಕ್ಕೆ ಸಂಬಂಧಿಸಿ ಮದರಸಾದ ಶಿಕ್ಷಕ ಅಂಗಡಿ ಬಳಿಯ ಸಿಸಿಟಿವಿ ದೃಶ್ಯಾವಳಿಯನ್ನು ಗಮನಿಸಿದ್ದಾರೆ ಈ ವೇಳೆ ಮದರಸಾದಲ್ಲೇ ಕಲಿಯುವ ವಿದ್ಯಾರ್ಥಿ ವಾಚು ಕದ್ದಿರುವುದು ಬೆಳಕಿಗೆ ಬಂದಿದೆ.
ಘಟನೆಯಿಂದ ಕೋಪಗೊಂಡ ಶಿಕ್ಷಕ ವಿದ್ಯಾರ್ಥಿಯನ್ನು ಅರೆಬೆತ್ತಲೆಗೊಳಿಸಿ ಬೆನ್ನಿಗೆ ಉಗುಳಿ ಥಳಿಸಿದ್ದಾನೆ, ಅಷ್ಟು ಮಾತ್ರವಲ್ಲದೆ ಅಲ್ಲಿನ ಇತರ ವಿದ್ಯಾರ್ಥಿಗಳಿಂದಲೂ ಬೆನ್ನಿಗೆ ಉಗಿಸಿ ಥಳಿಸಲು ಹೇಳಿದ್ದಾನೆ, ಈ ಘಟನೆಯ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಬಳಿಕ ಬಾಲಕನ ಕುಟುಂಬಕ್ಕೂ ತಲುಪಿದೆ. ಕೂಡಲೇ ಎಚ್ಚೆತ್ತ ಬಾಲಕನ ಪೋಷಕರು ಮದರಸಾ ಶಿಕ್ಷಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ, ಅಲ್ಲದೆ ಬಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಪೋಷಕರ ಜೊತೆ ಕಳುಹಿಸಿ ಕೊಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ

ಇದನ್ನೂ ಓದಿ: Student Union Polls: ಜೆಎನ್‌ ಯು ಕ್ಯಾಂಪಸ್‌ ನಲ್ಲಿ ವಿದ್ಯಾರ್ಥಿ ಸಂಘಟನೆಗಳ ಮಾರಾಮಾರಿ!

Advertisement

Udayavani is now on Telegram. Click here to join our channel and stay updated with the latest news.

Next