Advertisement

Noida: ಕಾಂಕ್ರೀಟ್‌ ಕಂಬಕ್ಕೆ ಶಾಲಾ ಬಸ್ಸು ಢಿಕ್ಕಿ;16 ಮಕ್ಕಳಿಗೆ ಗಾಯ

11:42 AM Nov 17, 2018 | udayavani editorial |

ನೋಯ್ಡಾ, ಉತ್ತರ ಪ್ರದೇಶ : ಇಲ್ಲಿನ ಅಂಡರ್‌ ಪಾಸ್‌ ಒಂದರಲ್ಲಿ ವೇಗವಾಗಿ ಧಾವಿಸಿ ಬಂದ ಶಾಲಾ ಬಸ್ಸೊಂದು ಕಾಂಕ್ರೀಟ್‌ ಕಂಬಕ್ಕೆ ಢಿಕ್ಕಿ ಹೊಡೆದ ಅವಘಢದಲ್ಲಿ 16 ಶಾಲಾ ಮಕ್ಕಳ ಸಹಿತ 18 ಮಂದಿ ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ.

Advertisement

ರಜನೀಗಂಧ ಚೌಕದಲ್ಲಿನ ಅಂಡರ್‌ ಪಾಸ್‌ ದಾಟುವ ವೇಳೆ ಖಾಸಗಿ ಶಾಲಾ ಬಸ್ಸು ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ಇಂದು ಶನಿವಾರ ಬೆಳಗ್ಗೆ ಸುಮಾರು 8 ಗಂಟೆಯ ಹೊತ್ತಿಗೆ ನಡೆಯಿತು; ಗಾಯಾಳುಗಳನ್ನು ಒಡನೆಯೇ ಕೈಲಾಶ್‌ ಆಸ್ಪತ್ರೆಗೆ ಒಯ್ಯಲಾಗಿ ಪ್ರಥಮ ಚಿಕಿತ್ಸೆ ನೀಡಿ ಬಿಡುಗಡೆಗೊಳಿಸಲಾಯಿತು  ಎಂದು ಸೆಕ್ಟರ್‌ 20ರ ಪೊಲೀಸ್‌ ಠಾಣಾಧಿಕಾರಿ ಮನೋಜ್‌ ಕುಮಾರ್‌ ಪಂತ್‌ ಹೇಳಿದರು.

ಪೊಲೀಸರು ಬಸ್ಸನ್ನು ವಶಪಡಿಸಿಕೊಂಡಿದ್ದು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next