Advertisement
ಶಹಜಹಾನ್ಪುರವೊಂದರಲ್ಲೇ ಶನಿವಾರ ರಾತ್ರಿ ಸಿಡಿಲಿಗೆ ಕನಿಷ್ಠ 6 ಮಂದಿ ಬಲಿಯಾಗಿದ್ದು, 7 ಮಂದಿ ಗಾಯಗೊಂಡಿ ದ್ದಾರೆ. ಸೀತಾಪುರ ಜಿಲ್ಲೆಯಲ್ಲಿ ಮೂವರು, ಔರಯ್ನಾ ಮತ್ತು ಅಮೇಠಿಯಲ್ಲಿ ತಲಾ ಇಬ್ಬರು, ಲಖೀಂಪುರ ಖೇರಿ, ರಾಯ ಬರೇಲಿ, ಉನ್ನಾವ್ನಲ್ಲಿ ತಲಾ ಒಬ್ಬರು ಮಳೆ ಸಂಬಂಧಿ ದುರಂತಗಳಿಗೆ ಬಲಿಯಾಗಿದ್ದಾರೆ. 18 ಜಾನುವಾರುಗಳೂ ಅಸುನೀಗಿದ್ದು, 461 ಮನೆಗಳು ಹಾನಿಗೀಡಾಗಿವೆ.
ಇದೇ ವೇಳೆ, ಹಿಮಾಚಲ ಪ್ರದೇಶ ದಲ್ಲಿ ಮೂರು ಡೋಪ್ಲರ್ ರೇಡಾರ್ಗಳು, ಸ್ನೋ ಗೇಜರ್ಗಳು ಹಾಗೂ ಅಟೋಮ್ಯಾಟಿಕ್ ಹವಾಮಾನ ಕೇಂದ್ರಗಳನ್ನು ನಿರ್ಮಿಸುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಇವುಗಳ ಮೂಲಕ ಹವಾಮಾನ, ಹಿಮಪಾತ ಹಾಗೂ ಭೂಕುಸಿತಗಳ ಕುರಿತು ನಿಖರ ಮಾಹಿತಿ ಪಡೆಯಬಹುದಾಗಿದೆ ಎಂದಿದೆ.