Advertisement

16 ಬಿಪಿಎಲ್‌ ಕಾರ್ಡ್‌ ವಾಪಸ್‌

05:04 PM Oct 12, 2019 | Team Udayavani |

ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ಅಕ್ರಮವಾಗಿ ಬಿಪಿಎಲ್‌ ಕಾರ್ಡ್‌ ಹೊಂದಿದ್ದವರಿಗೆ ಸ್ವಯಂ ಪ್ರೇರಿತವಾಗಿ ಆಹಾರ ಇಲಾಖೆಗೆ ಹಿಂದಿರುಗಿಸಲು ಸೆ. 30 ಕೊನೆಯ ದಿನ ಎಂದು ಸರ್ಕಾರ ಆದೇಶ ನೀಡಿತ್ತು.

Advertisement

ಇದರ ಅನ್ವಯ 16 ಕಾರ್ಡ್‌ಗಳು ಸ್ವಯಂ ಪ್ರೇರಿತವಾಗಿ ಹಿಂದಿರುಗಿಸಲ್ಪಟ್ಟಿವೆ. ಅರ್ಥಿಕವಾಗಿ ಸದೃಢವಾಗಿದ್ದರೂ ಅಕ್ರಮವಾಗಿ ಬಿಪಿಎಲ್‌ ಕಾರ್ಡ್‌ ಹೊಂದಿದ್ದವರನ್ನು ಗುರುತಿಸಿ

ಕಾರ್ಡ್‌ ರದ್ದುಗೊಳಿಸಬೇಕು ಎಂಬ ಸರ್ಕಾರದ ತೀರ್ಮಾನದಂತೆ ಸೆ. 30ರ ಒಳಗೆ ಹಿಂದಿರುಗಿಸಲು ತಿಳಿಸಿತ್ತು. ಸರ್ಕಾರದ ನಿಯಮಗಳ ಪ್ರಕಾರ 7.5 ಕೃಷಿ ಭೂಮಿ, 1.2ಲಕ್ಷಕ್ಕೂ ಹೆಚ್ಚು ವಾರ್ಷಿಕ ವರಮಾನ ಹೊಂದಿರುವ, ವರ್ತಕರು, 1000 ಅಡಿಗಿಂತ ದೊಡ್ಡ ಮನೆ ಹೊಂದಿದವರು, ಕಾರು ಟ್ರ್ಯಾಕ್ಟರ್‌ ಹೊಂದಿರುವವರು ಬಿಪಿಎಲ್‌ ಕಾರ್ಡ್‌ ಹೊಂದಲು ಅನರ್ಹರು ಎಂಬ ಸೂಚನೆ ಹೊರಡಿಸಲಾಗಿದೆ. ನಿಯಮಗಳನ್ನು ಮೀರಿ ಬಿಪಿಎಲ್‌ ಕಾರ್ಡ್‌ ಹೊಂದಿದ್ದಾರೆ ಕಾನೂನು ಕ್ರಮ ಅನಿವಾರ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next