Advertisement

ಬರ ತಾಲೂಕುಗಳಿಗೆ 152 ಕೋಟಿ

12:30 AM Feb 13, 2019 | |

ಬೆಂಗಳೂರು: ರಾಜ್ಯದ ಬರಪೀಡಿತ 156 ತಾಲೂಕುಗಳಲ್ಲಿ ಪರಿಹಾರ ಕಾರ್ಯಗಳಿಗೆ ತಲಾ ಒಂದು ಕೋಟಿ ರೂ. ನಂತೆ 156 ಕೋಟಿ ರೂ. ಬಿಡುಗಡೆಯಾಗಿದೆ. 156 ತಾಲೂಕುಗಳಲ್ಲಿ ಕುಡಿಯುವ ನೀರು ಪೂರೈಕೆ, ಜಾನುವಾರುಗಳಿಗೆ ಮೇವು ವ್ಯವಸ್ಥೆ ಸೇರಿ ಬರ ಪರಿಹಾರ ಕಾಮಗಾರಿಗಳಿಗಾಗಿ ಜಿಲ್ಲಾಧಿಕಾರಿಗಳ ಖಾತೆಗೆ ಹಣ ಜಮೆ ಮಾಡಲಾಗಿದೆ. ಜತೆಗೆ, ಹಿಂಗಾರು ಹಂಗಾಮಿನಲ್ಲಿ ಕೈ ಬಿಡಲಾಗಿದ್ದ ಚನ್ನಪಟ್ಟಣ, ಕೊಳ್ಳೇಗಾಲ, ಗುಬ್ಬಿ, ಕುಣಿಗಲ್‌, ಮಳವಳ್ಳಿ , ಮದ್ದೂರು ತಾಲೂಕುಗಳಿಗೆ ತಲಾ 1 ಕೋಟಿ ರೂ. ಸಹ ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next