Advertisement

ಚಳ್ಳಕೆರೆಯಲ್ಲಿ 15 ದಿನ ಕ್ಷೌರದಂಗಡಿಗಳು ಬಂದ್‌

10:03 AM Jul 03, 2020 | Suhan S |

ಚಳ್ಳಕೆರೆ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ನಗರದ ಎಲ್ಲಾ ಕ್ಷೌರಿಕರು ಸ್ವಯಂಪ್ರೇರಿತರಾಗಿ 15 ದಿನಗಳ ಕಾಲ ಕ್ಷೌರದಂಗಡಿಗಳನ್ನು ಬಂದ್‌ ಮಾಡುವ ತೀರ್ಮಾನ ಕೈಗೊಂಡಿದ್ದಾರೆ.  ಕ್ಷೌರದಂಗಡಿಗಳನ್ನು 15 ದಿನಗಳ ಕಾಲ ಬಂದ್‌ ಮಾಡಿ ಕೋವಿಡ್ ನಿಯಂತ್ರಣ ಕಾರ್ಯಕ್ಕೆ ಸಹಕಾರ ನೀಡಲು ನಿರ್ಧರಿಸಲಾಗಿದೆ ಎಂದು ಸವಿತಾ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಎಸ್‌. ರಾಜು ತಿಳಿಸಿದರು.

Advertisement

ಕ್ಷೌರದಂಗಡಿಗಳನ್ನು ಬಂದ್‌ ಮಾಡುವ ಬಗ್ಗೆ ನಗರದ ಹೊರವಲಯದಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯ ಸವಿತಾ ಸಂಘದ ನಿರ್ದೇಶನದ ಮೇರೆಗೆ ಚಳ್ಳಕೆರೆ ನಗರ ಹಾಗೂ ತಾಲೂಕಿನ ಸವಿತಾ ಸಮಾಜದವರು ಈ ನಿರ್ಧಾರ ಕೈಗೊಂಡಿದ್ದೇವೆ. ಅಲ್ಲದೆ ಜಾಗ್ರತೆ ವಹಿಸಲು ಜಿಲ್ಲಾಡಳಿತ ಕೂಡ ಸೂಚನೆ ನೀಡಿದೆ. ಸವಿತಾ ಸಮಾಜದ ಬಂಧುಗಳು ತಮ್ಮ ಸ್ವಇಚ್ಛೆ ಮೇರೆಗೆ ಜು. 2 ರಿಂದ 17ರ ತನಕ ನಗರ ಹಾಗೂ ಗ್ರಾಮೀಣ ಮಟ್ಟದ ಕ್ಷೌರದಂಗಡಿಗಳನ್ನು ಬಂದ್‌ ಮಾಡಲು ತೀರ್ಮಾನಿಸಿದ್ದಾರೆ. ಸಾರ್ವಜನಿಕರಿಗೆ ಆಗುವ ತೊಂದರೆ ಗಳಿಗೆ ವಿಷಾದಿಸುತ್ತೇವೆ ಎಂದರು. ಸಂಘದ ಕಾರ್ಯದರ್ಶಿ ಬಿ.ಎಸ್‌. ಶಿವರಾಮ್‌, ಖಜಾಂಚಿ ಎಚ್‌. ಪ್ರಕಾಶ್‌, ಕಾರ್ಯಾಧ್ಯಕ್ಷ ಆರ್‌. ನಾಗರಾಜ, ವೀರಕೇಸರಿ, ಗೌರವಾಧ್ಯಕ್ಷ ಎಸ್‌.ಪಿ. ಶ್ರೀನಿವಾಸನ್‌ ಹಾಗೂ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next