Advertisement

Theft: ನಗದು ಸೇರಿದಂತೆ 15.07 ಲಕ್ಷ ರೂ. ಸೊತ್ತು ಕಳವು

12:25 AM Aug 18, 2023 | Team Udayavani |

ಉಪ್ಪಿನಂಗಡಿ: ಜಗದಾಂಭ ಏಜೆನ್ಸಿ ಎಲೆಕ್ಟ್ರಿಕಲ್‌ ಮತ್ತು ಹಾರ್ಡ್‌ವೇರ್‌ ಮಳಿಗೆಗೆ ನುಗ್ಗಿದ ಕಳ್ಳರು 2 ಲಕ್ಷ ರೂ. ನಗದು ಸಹಿತ ಸುಮಾರು 15.07 ಲಕ್ಷದ ಸೊತ್ತುಗಳನ್ನು ಕಳವು ಮಾಡಿದ ಘಟನೆ ನೆಲ್ಯಾಡಿಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ

Advertisement

ಪ್ರಕಾಶ್‌ ಕೆ.ಜೆ. ಮಾಲಕತ್ವದ ಕಟ್ಟಡದಲ್ಲಿ ರಾಜಸ್ಥಾನದ ನಿವಾಸಿ ಕರಣ್‌ ಪಾಲ್‌ ಅವರ ಸಹೋದರನಿಗೆ ಸೇರಿದ ಎಲೆಕ್ಟ್ರಿಕಲ್‌ ಮತ್ತು ಹಾರ್ಡ್‌ವೇರ್‌ ಮಳಿಗೆಯಿದ್ದು, ಇದರ ಶಟರ್‌ ಅನ್ನು ಕತ್ತರಿಸಿ ಒಳಗಡೆ ನುಗ್ಗಿರುವ ಕಳ್ಳರು ಕ್ಯಾಶ್‌ ಡ್ರವರ್‌ನಲ್ಲಿದ್ದ ನಗದು ದೋಚಿದ್ದಲ್ಲದೆ, ಕೆಲವು ಸಾಮಗ್ರಿಗಳು ಹಾಗೂ ಅಂಗಡಿಯ ಒಳಗೆ ಇದ್ದ ಸಿಸಿ ಕೆಮರಾದ ಡಿವಿಆರ್‌ ಅನ್ನು ಕಳವು ಮಾಡಿದ್ದಾರೆ. ಆ. 17ರಂದು ಬೆಳಗ್ಗೆ ಕರಣ್‌ಪಾಲ್‌ ಅವರ ಭಾವ ಪ್ರೇಮ್‌ ಸಿಂಗ್‌ ಅಂಗಡಿಯ ಬಾಗಿಲು ತೆರೆಯಲು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next