Advertisement

Rajasthan; ಗಣಿಯಲ್ಲಿ ಲಿಫ್ಟ್ ಕುಸಿದು ಸಂಕಷ್ಟಕ್ಕೆ ಸಿಲುಕಿದ್ದ 14 ಮಂದಿಯ ರಕ್ಷಣೆ

08:33 AM May 15, 2024 | Team Udayavani |

ಜುಂಜುನು( ರಾಜಸ್ಥಾನ): ರಾಜಸ್ಥಾನದ ಜುಂಜುನು ಜಿಲ್ಲೆಯ ಹಿಂದೂಸ್ಥಾನ ಕಾಪರ್ ಲಿಮಿಟೆಡ್‌ನ ಕೋಲಿಹಾನ್ ಗಣಿಯಲ್ಲಿ ಲಿಫ್ಟ್ ಕುಸಿದು ಸಂಕಷ್ಟಕ್ಕೆ ಸಿಲುಕಿದ್ದ ಕೋಲ್ಕತಾ ವಿಜಿಲೆನ್ಸ್ ತಂಡದ ಸದಸ್ಯರು ಸೇರಿದಂತೆ 14 ಜನರನ್ನು ರಕ್ಷಿಸಲಾಗಿದೆ. ಮಂಗಳವಾರ ರಾತ್ರಿ ಘಟನೆ ನಡೆದಿದ್ದು ಮೊದಲು ಮೂವರನ್ನು ಹೊರಗೆ ಕರೆತರಲಾಯಿತು, ನಂತರ ಉಳಿದ 11 ಜನರನ್ನು ರಕ್ಷಣೆ ಮಾಡಲಾಗಿದೆ.

Advertisement

ರಕ್ಷಿಸಿದ ಬಳಿಕ ಎಲ್ಲರನ್ನೂ ಜೈಪುರದ ಆಸ್ಪತ್ರೆಗೆ ರವಾನಿಸಲಾಗಿದೆ. ರಾತ್ರಿಯ ರಕ್ಷಣ ಕಾರ್ಯಾಚರಣೆಯು ಕೋಲಿಹಾನ್ ಗಣಿಯಲ್ಲಿ 577 ಮೀಟರ್ ಆಳದಲ್ಲಿ ಸಿಲುಕಿಕೊಂಡಿದ್ದ ಸಿಬಂದಿಯನ್ನು ರಕ್ಷಿಸಲಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಕಂಪನಿಯ ಹಿರಿಯ ಅಧಿಕಾರಿಗಳೊಂದಿಗೆ ವಿಜಿಲೆನ್ಸ್ ತಂಡವು ತಪಾಸಣೆಗಾಗಿ ಕೆಳಕ್ಕೆ ಇಳಿದಾಗ ಈ ಘಟನೆ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next