Advertisement

Nepal: ನದಿಗುರುಳಿದ ಭಾರತೀಯ ಪ್ರಯಾಣಿಕರಿದ್ದ ಬಸ್:27 ಮಂದಿ ಮೃತ್ಯು

12:53 AM Aug 24, 2024 | Team Udayavani |

ಕಠ್ಮಂಡು: ಭಾರತೀಯ ನೋಂದಣಿ ಹೊಂದಿದ್ದ ಬಸ್ಸೊಂದು ನೇಪಾಲದ ಮರ್ಸಂಗ್ದಿ ನದಿಗೆ ಉರುಳಿದ್ದು, 27 ಮಂದಿ ಮೃತಪಟ್ಟಿದ್ದಾರೆ. 43 ಮಂದಿ ಪ್ರಯಾಣಿಕರ ನ್ನೊಳಗೊಂಡಿದ್ದ ಬಸ್‌ ಪೋಖ್ರಾದಿಂದ ಕಠ್ಮಂಡುವಿಗೆ ತೆರಳುತ್ತಿತ್ತು.

Advertisement

ಈ ಬಗ್ಗೆ ಭಾರತೀಯ ರಾಯಭಾರ ಕಚೇರಿ, “ಅಪಘಾತದಲ್ಲಿ 27 ಭಾರತೀಯರು ಮೃತಪಟ್ಟಿರುವುದು ದುಃಖ ತಂದಿದೆ. ಇನ್ನುಳಿದ 16 ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆತರಲಾಗಿದ್ದು, ಚಿಕಿತ್ಸೆಗಾಗಿ ಕಠ್ಮಂಡುವಿಗೆ ಏರ್‌ಲಿಫ್ಟ್ ಮಾಡಲಾಗಿದೆ. ಮೃತಪಟ್ಟವರ ಕುಟುಂಬಕ್ಕೆ ರಾಯಭಾರ ಕಚೇರಿ ಸಂತಾಪ ಸೂಚಿಸುತ್ತದೆ’ ಎಂದು ಟ್ವೀಟ್‌ ಮಾಡಿದೆ. ನೇಪಾಲ ಭದ್ರತಾ ಪಡೆ, ಸೇನೆ, ಸಶಸ್ತ್ರ ಪೊಲೀಸ್‌ ಪಡೆ ಹಾಗೂ ನೇಪಾಲ ಪೊಲೀಸ್‌ ಸೇರಿ 250 ಮಂದಿ ರಕ್ಷಣ ಕಾರ್ಯದಲ್ಲಿ ಭಾಗಿಯಾಗಿದ್ದರೆಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಮಹಾರಾಷ್ಟ್ರದ 104 ಮಂದಿಯ ತಂಡವು 10 ದಿನಗಳಯಾತ್ರೆಗೆಂದು ಉತ್ತರ ಪ್ರದೇಶದ ಗೋರಖ್‌ಪುರದಿಂದ ಮೂರು ಬಸ್‌ಗಳಲ್ಲಿ ಎರಡು ದಿನಗಳ ಹಿಂದೆ ನೇಪಾಲಕ್ಕೆ ಹೊರಟಿತ್ತು.

ಇದನ್ನೂ ಓದಿ: Kota: ನವವಿವಾಹಿತೆಯ ದಾರುಣ ಹತ್ಯೆ; ಪತಿಯಿಂದಲೇ ಕೃತ್ಯ ಶಂಕೆ; ಆರೋಪಿ ಪೊಲೀಸ್ ವಶಕ್ಕೆ

Advertisement

Advertisement

Udayavani is now on Telegram. Click here to join our channel and stay updated with the latest news.

Next