Advertisement

ಬಿಹಾರದಲ್ಲೊಂದು ಅಮಾನುಷ ಕೃತ್ಯ… 12 ವರ್ಷದ ಬಾಲಕನನ್ನು ರೈಲು ಹಳಿಗೆ ಕಟ್ಟಿಹಾಕಿ ಥಳಿತ

09:44 AM Jul 15, 2024 | Team Udayavani |

ಬಿಹಾರ: ಕಳ್ಳತನ ಮಾಡಿರುವ ಆರೋಪದ ಮೇಲೆ ಹನ್ನೆರಡು ವರ್ಷದ ಬಾಲಕನನ್ನು ರೈಲು ಹಳಿಗೆ ಕಟ್ಟಿ ಮನ ಬಂದಂತೆ ಥಳಿಸಿರುವ ಅಮಾನುಷ ಘಟನೆ ಬಿಹಾರದ ಜಾನೀಪುರದಲ್ಲಿ ನಡೆದಿರುವುದಾಗಿ ಬೆಳಕಿಗೆ ಬಂದಿದೆ.

Advertisement

ಬಲ್ಲಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಜಾನಿಪುರ್ ಗ್ರಾಮದಲ್ಲಿರುವ ಅಂಗಡಿಯೊಂದರಲ್ಲಿ ಬಾಲಕ ಕಳ್ಳತನ ನಡೆಸಿದ್ದಾನೆ ಎಂದು ವ್ಯಕ್ತಿಯೋರ್ವ ಬಾಲಕನನ್ನು ರೈಲ್ವೆ ಹಳಿಗೆ ಕಟ್ಟಿ ಹಾಕಿ ಕೋಲಿನಿಂದ ಮನಬಂದಂತೆ ಥಳಿಸಿದ್ದಾನೆ, ಘಟನೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಬಲ್ಲಿಯಾ ಡಿಎಸ್ಪಿ ನೇಹಾ ಕುಮಾರಿ ಅವರ ಸೂಚನೆ ಮೇರೆಗೆ ಬಲ್ಲಿಯಾ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಬಾಲಕನನ್ನು ರಕ್ಷಣೆ ಮಾಡಿ ಠಾಣೆಗೆ ಕರೆತಂದಿದ್ದಾರೆ,

ಅಲ್ಲದೆ ಬಾಲಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಜಾನಿಪುರ ಗ್ರಾಮದ ರೋಷನ್ ಕುಮಾರ್, ಜೈ ಜೈ ರಾಮ್ ಚೌಧರಿ ಮತ್ತು ರಾಹುಲ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Udupi: ಬೆಳ್ಳಂಬೆಳಗ್ಗೆ ಮನೆಯಲ್ಲಿ ಅಗ್ನಿ ದುರಂತ: ಬಾರ್ ಮಾಲೀಕ ಮೃತ್ಯು, ಪತ್ನಿ ಗಂಭೀರ  

Advertisement

Udayavani is now on Telegram. Click here to join our channel and stay updated with the latest news.

Next