Advertisement

ಜಮೀನು ಮಂಜೂರಾತಿಗಾಗಿ 110 ವರ್ಷದ ವೃದ್ಧೆಯ ಪ್ರಯತ್ನ!

07:31 PM Mar 06, 2018 | Team Udayavani |

ಮೂಡಿಗೆರೆ: ತಾನು ಕಳೆದ 40 ವರ್ಷದಿಂದ  ಸಾಗುವಳಿ ಮಾಡಿಕೊಂಡು ಬಂದಿರುವ 4 ಎಕರೆ ಕಾಫಿ ಹಾಗೂ ಅಡಿಕೆ ತೋಟವನ್ನು ತನ್ನ ಹೆಸರಿಗೆ ಮಂಜೂರು ಮಾಡಿಕೊಡಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಕೋಳೂರು ಗ್ರಾಮದ ಬಡವನದಿಣ್ಣೆಯ ನಿವಾಸಿ 110 ವರ್ಷ ಪ್ರಾಯದ ಸುಬ್ಬಮ್ಮ ತಮ್ಮ ಅಳಲು ತೋಡಿಕೊಂಡಿದ್ದರು.

Advertisement

ಜಮೀನು ಮಂಜೂರಿಗಾಗಿ ಅರ್ಜಿ ಸಲ್ಲಿಸಲು ತಹಶೀಲ್ದಾರ್‌ ಕಚೇರಿ ಬಾಗಿಲಲ್ಲಿ ಸೋಮವಾರ ಕಚೇರಿಗೆ ಶಾಸಕರು ಬರಲಿದ್ದಾರೆ ಎಂದು ಸಂಜೆವರೆಗೂ ಕಾದು ಕುಳಿತಿದ್ದರು. ಈ ವೇಳೆ ಅಜ್ಜಿ ಸುಬ್ಬಮ್ಮ ಅವರೊಂದಿಗೆ ಸುದ್ದಿಗಾರರು ಮಾತನಾಡಿಸಿದಾಗ, ಕೋಳೂರು ಗ್ರಾಮದ ಸರ್ವೆ ನಂ 173 ರಲ್ಲಿ ತಾನು 40 ವರ್ಷದಿಂದ ಕಾಫಿ, ಅಡಿಕೆ ಬೆಳೆದುಕೊಂಡಿದೇನೆ. 1989ರಲ್ಲಿ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿ ಭೂಮಿ ಮಂಜೂರು ಮಾಡಿಕೊಡುವಂತೆ ಕೇಳಿಕೊಂಡಿದ್ದೆ. ಆರ್ಜಿ ಇದೂವರೆಗೂ ಇತ್ಯರ್ಥವಾಗಿಲ್ಲ. ಇತ್ತೀಚೆಗೆ ಕಂದಾಯ ಅಧಿ ಕಾರಿಗಳು ಸ್ಥಳ ಪರಿಶೀಲಿಸಿದ್ದಾರೆ. ಸರ್ವೆ ಕೂಡ ನಡೆದಿದೆ. ಆದರೆ ಮಂಜೂರಾತಿಗಾಗಿ ಕಾಯುತ್ತಿದ್ದರೂ ಇನ್ನೂ ಮಾಡಿಕೊಟ್ಟಿಲ್ಲ. ಇಂದು ಫಾ.ನಂ 53 ಸಭೆ ಇದೆ. ಶಾಸಕರು ಬರುತ್ತಾರೆ ಎಂದು ವಿಷಯ ತಿಳಿಯಿತು.  ಹಾಗಾಗಿ ತಾನು ಬಂದು ಶಾಸಕರಿಗಾಗಿ ಕಾಯುತ್ತಿರುವುದಾಗಿ ತಿಳಿಸಿದರು. 

ತನಗೆ ಮೂವರು ಪುತ್ರರು, ಪುತ್ರಿ ಇದ್ದಾರೆ. ತನ್ನ ಗಂಡ ದಿ| ಸುಬ್ಬೇಗೌಡರು ಮಾಡಿಟ್ಟಿದ್ದ ಜಮೀನನ್ನು ನನ್ನ ಮಕ್ಕಳಿಗೆ ಹಂಚಿಕೆ ಮಾಡಿದ್ದಾರೆ. ಅವರೆಲ್ಲರೂ ಬೇರೆ ಬೇರೆಯಾಗಿ ವಾಸವಾಗಿದ್ದಾರೆ. ತಾನು ಮಗ ಲಕ್ಷ್ಮಣ ಗೌಡ ಅವರೊಂದಿಗೆ ವಾಸವಿದ್ದೇನೆ. ಹಾಗಾಗಿ ನಾನು ನೆಟ್ಟು ಬೆಳೆಸಿದ ಕಾಫಿ, ಅಡಿಕೆ ಬೆಳೆಯಿರುವ 4 ಎಕರೆ ಜಮೀನಿನ ಬೆಳೆಯನ್ನು ನಂಬಿಕೊಂಡೆ ಜೀವನ ನಡೆಸುತ್ತಿದೇನೆ ಎಂದು ಅಳಲು ತೋಡಿಕೊಂಡರು.  ಸುಬ್ಬಮ್ಮ ಜಮೀನನ್ನು ತನ್ನ ಹೆಸರಿಗೆ ಮಾಡಿಕೊಡಿ ಎಂದು ಗೋಗರೆಯುತ್ತಿದ್ದದ್ದು ನೋಡಿ, ಅಲ್ಲಿದ್ದ ಸಾರ್ವಜನಿಕರು ಮರುಕಪಡುತ್ತಿದ್ದರು. ನಂತರ ಸಂಜೆ 5.30ರ ವೇಳೆ ಸ್ಥಳಕ್ಕೆ ಆಗಮಿಸಿದ ಶಾಸಕ ಬಿ.ಬಿ.ನಿಂಗಯ್ಯ ಒತ್ತುವರಿ ಅರ್ಜಿ ವಿಲೆ  ಸಭೆಗೂ ಮುನ್ನ ಅಜ್ಜಿಯೊಂದಿಗೆ ಮಾತನಾಡಿ, ಆ ಜಮೀನನ್ನು ನಿಮ್ಮ ಹೆಸರಿಗೆ ಮಂಜೂರು ಮಾಡಿಕೊಡುವುಗಾಗಿ ತಿಳಿಸಿ.
ನೀವು ಮನೆಗೆ ಹೋಗಿ ವಿಶ್ರಾಂತಿ ಪಡೆಯಿರಿ ಎಂದು ಅಜ್ಜಿಯನ್ನು ಸಮಾಧಾನಪಡಿಸಿ ಕಳುಹಿಸಿದರು. ಚುನಾವಣೆ ಘೋಷಣೆಯಾಗುವ ಮುನ್ನವೇ ಅಜ್ಜಿಯ  ಜಮೀನನ್ನು ಮಂಜೂರಾತಿ ಮಾಡಿಕೊಡುವುದಾಗಿ ಶಾಸಕ ಬಿ.ಬಿ.ನಿಂಗಯ್ಯ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next