Advertisement

11 ಐಎಎಸ್ ಅಧಿಕಾರಿಗಳ ವರ್ಗಾವಣೆ: ರಾಜ್ಯ ಸರ್ಕಾರ ಆದೇಶ

10:52 PM Jun 06, 2023 | Team Udayavani |

ಬೆಂಗಳೂರು: ಹನ್ನೊಂದು ಮಂದಿ ಐಎಎಸ್‌ ಹಿರಿಯ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ಸೂಚಿಸಿರುವ ಸ್ಥಳಗಳಿಗೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

Advertisement

ಕಪಿಲ್‌ ಮೋಹನ್‌-ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಪ್ರವಾಸೋದ್ಯಮ ಇಲಾಖೆ; ಉಮಾಶಂಕರ್‌ಎಸ್‌.ಆರ್‌. ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಶಿಕ್ಷಣ ಇಲಾಖೆ(ಉನ್ನತ ಶಿಕ್ಷಣ); ಮಂಜುನಾಥ ಪ್ರಸಾದ್‌- ಪ್ರಧಾನ ಕಾರ್ಯದರ್ಶಿ,ಸಹಕಾರ ಇಲಾಖೆ; ವಿ. ಅನುºಕುಮಾರ್‌-ಕಾರ್ಯದರ್ಶಿ, ಕೃಷಿ ಇಲಾಖೆ; ಮೋಹನ್‌ ರಾಜ್‌ ಕೆ.ಪಿ.- ಕಾರ್ಯದರ್ಶಿ, ತೋಟಗಾರಿಕೆ, ರೇಷ್ಮೆ ಇಲಾಖೆ; ಡಾ| ರಿಚರ್ಡ್‌ ವಿನ್ಸೆಂಟ್‌ ಡಿ’ಸೋಜಾ – ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ (ಎಂಎಸ್‌ಎಂಇ ಮತ್ತು ಗಣಿ): ಗಿರೀಶ್‌ ಆರ್‌.- ನಿರ್ದೇಶಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ: ಕರೀಗೌಡ- ನಿರ್ದೇಶಕ, ಅಟಲ್‌ ಜನ ಸ್ನೇಹಿ ಕೇಂದ್ರ, ಬೆಂಗಳೂರು; ವೈ.ಎಸ್‌. ಪಾಟೀಲ್‌- ಆಯುಕ್ತರು, ಕೃಷಿ ಇಲಾಖೆ, ಬೆಂಗಳೂರು; ಜಗದೀಶ ಜಿ.- ವ್ಯವಸ್ಥಾಪಕ ನಿರ್ದೇಶಕ, ಕೆಎಸ್‌ಟಿಡಿಸಿ, ಬೆಂಗಳೂರು; ಡಾ| ಮಹೇಶ್‌ ಎಂ.- ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ, ಕೆಐಎಡಿಬಿ, ಬೆಂಗಳೂರು.

ಕೆಎಎಸ್‌ ಅಧಿಕಾರಿಗಳ ವರ್ಗಾವಣೆ
ಕೆಎಎಸ್‌ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ಸೂಚಿಸಿರುವ ಹುದ್ದೆಗಳಿಗೆ ವರ್ಗಾವಣೆಗೊಳಿಸಿ ರಾಜ್ಯ ಸಸಕಾರ ಆದೇಶ ಹೊರಡಿಸಿದೆ.

ಹಸನ್‌ ಸಾಹೇಬ ಎಂ.ಟಿ.- ವಿಶೇಷ ಕರ್ತವ್ಯಾಧಿಕಾರಿ, ವಸತಿ, ವಕ್ಫ್ , ಅಲ್ಪಸಂಖ್ಯಾಕ ಕಲ್ಯಾಣ ಇಲಾಖೆ ಸಚಿವರು. (ಗೃಹ ಮಂಡಳಿ ವಿಶೇಷ ಭೂಸ್ವಾಧೀನಾಧಿಕಾರಿ-1 ಅಧಿಕ ಪ್ರಭಾರ), ಡಾ| ರಾಜೇಂದ್ರ ಪ್ರಸಾದ್‌ ಎಂ.ಎನ್‌.- ಆಪ್ತ ಕಾರ್ಯದರ್ಶಿ, ಉಪ ಮುಖ್ಯಮಂತ್ರಿ, (ನಿಯಂತ್ರಕರು, ಕಾನೂನು ಮಾಪನ ಶಾಸ್ತ್ರ ಇಲಾಖೆ ಪ್ರಭಾರ), ನಾಗೇಂದ್ರ ನಾಯಕ್‌ ಟಿ.ಎಚ್‌.- ಆಪ್ತ ಕಾರ್ಯದರ್ಶಿ, ಅಬಕಾರಿ ಸಚಿವರು, ಎಸ್‌.ಜಿಯವುಲ್ಲಾ (ನಿವೃತ್ತ ಐಎಎಸ್‌)- ಆಪರ ಕಾರ್ಯದರ್ಶಿ, ಮುಖ್ಯಮಂತ್ರಿ.

Advertisement

Udayavani is now on Telegram. Click here to join our channel and stay updated with the latest news.

Next