Advertisement

10%; ದೇಗುಲ ಮಸೂದೆಗೆ ಅಂಗೀಕಾರ ಪಡೆದ ಸರಕಾರ

12:13 AM Mar 01, 2024 | Team Udayavani |

ಬೆಂಗಳೂರು: ರಾಜ್ಯದ ಶ್ರೀಮಂತ ದೇಗುಲಗಳ ವಾರ್ಷಿಕ ಆದಾಯದ ಶೇ.10ರಷ್ಟು ಮೊತ್ತವನ್ನು ಸರಕಾರಕ್ಕೆ ನೀಡುವ ಮಸೂದೆಯನ್ನು 2ನೇ ಬಾರಿಗೆ ಗುರುವಾರ ವಿಧಾನಮಂಡಲ

Advertisement

ದಲ್ಲಿ ಮಂಡಿಸಿ ಅಂಗೀಕಾರ ಪಡೆಯಲಾಗಿದೆ. ವಿಧಾನಸೌಧದಲ್ಲಿ ಪಾಕ್‌ ಪರ ಘೋಷಣೆ ಕೂಗಲಾಗಿದೆ ಎಂಬ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಬೇಕು ಎಂದು ಬಿಜೆಪಿ ಶಾಸಕರು ಗದ್ದಲ ಎಬ್ಬಿಸುತ್ತಿರುವಂತೆಯೇ ಮಸೂದೆ ಯನ್ನು ಅಂಗೀಕರಿಸಲಾಯಿತು.

ಈ ಮಸೂದೆಯಲ್ಲಿ ಶ್ರೀಮಂತ ದೇಗುಲಗಳಿಂದ ಪಡೆದುಕೊಳ್ಳುವ ವಾರ್ಷಿಕ ಆದಾಯದ ಮೊತ್ತವನ್ನು ರಾಜ್ಯದ “ಸಿ’ ಮತ್ತು “ಡಿ’ ದರ್ಜೆಯ ದೇಗುಲಗಳ ಅಭಿವೃದ್ಧಿ, ಅರ್ಚಕರಿಗೆ ವೇತನ ಮತ್ತಿತರ ಸೌಲಭ್ಯಗಳನ್ನು ನೀಡಲು ಬಳಕೆ ಮಾಡಲಾಗುತ್ತದೆ ಎಂದು ಸರಕಾರ ಹೇಳಿಕೊಂಡಿದೆ.

ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಸೂದೆ-2024, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಮಸೂದೆ-2024ಕ್ಕೂ ಅಂಗೀಕಾರ ಪಡೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next