Advertisement

Puttur; ಅಡಿಕೆ ಸಾಗಾಟ ಲಾರಿಯಲ್ಲಿದ್ದ 10 ಲಕ್ಷ ರೂ. ನಗದು ನಾಪತ್ತೆ: ದೂರು

10:11 PM Jul 21, 2023 | Team Udayavani |

ಪುತ್ತೂರು: ಅಡಿಕೆ ಸಾಗಾಟದ ಲಾರಿಯಿಂದ ಲಕ್ಷಾಂತರ ರೂ. ನಗದು ಕಳವಾಗಿರುವ ಮತ್ತು ಲಾರಿಯ ನಿರ್ವಾಹಕ ನಾಪತ್ತೆಯಾಗಿರುವ ಬಗ್ಗೆ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಪುತ್ತೂರಿನ ಅಝರ್‌ ಟ್ರಾನ್ಸ್‌ಪೊàರ್ಟ್‌ ಸಂಸ್ಥೆಯ ಮಾಲಕ ಬನ್ನೂರು ನಿವಾಸಿ ಅಝರ್‌ ಕಾಂಪೌಂಡ್‌ನ‌ ಕಲಂದರ್‌ ಇಬ್ರಾಹಿಂ ನೌಷದ್‌ ದೂರು ನೀಡಿದವರು. ಅವರು ಲಾರಿಯ ಮೂಲಕ ಪುತ್ತೂರಿನಿಂದ ಪುಣೆಗೆ ಅಡಿಕೆ ಸಾಗಾಟ ಮಾಡಿಸಿ ಜು. 18ರಂದು ಲಾರಿ ಹಿಂದಿರುಗುವಾಗ ಪುಣೆಯ ಅಝರ್‌ ಟ್ರೇಡಿಂಗ್‌ ಸಂಸ್ಥೆಯ ಸಿಬಂದಿ ಸಫಝ್ ಅವರು ಲಾರಿ ಚಾಲಕ ಅಬ್ದುಲ್‌ ರವೂಫ್‌ ಕಬಕ ಮತ್ತು ನಿರ್ವಾಹಕ ಶಿವಕುಮಾರ್‌ ಯಾನೆ ಶಿವು ಅವರಲ್ಲಿ ಕಲಂದರ್‌ ಇಬ್ರಾಹಿಂ ನೌಷದ್‌ ಅವರಿಗೆ ನೀಡಲೆಂದು 10 ಲಕ್ಷ ರೂ. ನಗದು ನೀಡಿದ್ದರು.

ಬಳಿಕ ಲಾರಿ ಅಲ್ಲಿಂದ ಹೊರಟು ತೊಕ್ಕೊಟ್ಟುವಿನಲ್ಲಿ ಚಾಲಕ ಅಬ್ದುಲ್‌ ರವೂಫ್‌ ಅವರು ಲಾರಿ ನಿಲ್ಲಿಸಿ ಮಾರುಕಟ್ಟೆಗೆ ಹೋಗಿ ಹಿಂದಿರುಗುವಾಗ ಕಂಡಕ್ಟರ್‌ ಶಿವಕುಮಾರ್‌ ಯಾನೆ ಶಿವು ನಾಪತ್ತೆಯಾಗಿದ್ದ. ಲಾರಿಯಲ್ಲಿಟ್ಟಿದ್ದ ಹಣವೂ ಇರಲಿಲ್ಲ. ಘಟನೆ ಕುರಿತು ಲಾರಿ ಚಾಲಕ ಮಾಲಕರಿಗೆ ತಿಳಿಸಿದ್ದು, ಅದರಂತೆ ಕಲಂದರ್‌ ಇಬ್ರಾಹಿಂ ಅವರು ನಿರ್ವಾಹಕನ ವಿರುದ್ಧ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next