Advertisement

Lucknow: ನಾಲಗೆ ಕತ್ತರಿಸಲು 10 ಲಕ್ಷ ರೂ. ಘೋಷಣೆ!

12:01 AM Aug 31, 2023 | Team Udayavani |

ಲಕ್ನೋ: ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್‌ ಮೌರ್ಯ ಅವರ ನಾಲಗೆ ಕತ್ತರಿಸಿದವರಿಗೆ 10 ಲಕ್ಷ ರೂ.ಗಳ ಬಹುಮಾನ ನೀಡುವುದಾಗಿ ಕಾಂಗ್ರೆಸ್‌ ನಾಯಕ ಪಂಡಿತ್‌ ಗಂಗಾರಾಮ್‌ ಶರ್ಮ ಘೋಷಿಸಿದ್ದು, ಇದೀಗ ಜಾಲತಾಣಗಳಲ್ಲಿ ಈ ವಿಚಾರ ಭಾರೀ ವೈರಲ್‌ ಆಗಿ, ವಿವಾದಕ್ಕೀಡಾಗಿದೆ.

Advertisement

ಇತ್ತೀಚೆಗಷ್ಟೇ ಮೌರ್ಯ, ಟ್ವಿಟರ್‌ನ ಪೋಸ್ಟ್‌ ಒಂದರಲ್ಲಿ ಹಿಂದೂ ಧರ್ಮ ಎನ್ನುವುದೇ ಇಲ್ಲ, ಅದೊಂದು ನೆಪ ಅಷ್ಟೇ! ಬ್ರಾಹ್ಮಣರ ಧರ್ಮವನ್ನೇ ಹಿಂದೂ ಧರ್ಮವೆಂದು ಬಿಂಬಿಸಲಾಗುತ್ತಿದೆ. ಅಂಥ ಯಾವುದೇ ಧರ್ಮವೂ ಇಲ್ಲ, ಇದ್ದಿದ್ದರೆ, ದಲಿತರು, ಬುಡಕಟ್ಟು ಜನರಿಗೂ ಗೌರವ ಸಿಗುತ್ತಿತ್ತು ಎಂದು ಹೇಳಿದ್ದರು. ಈ ಹಿಂದೆಯೂ ಜನವರಿಯಲ್ಲಿ ಮೌರ್ಯ “ರಾಮಚರಿತಮಾನಸ’ ಗ್ರಂಥ ನಿಷೇಧಿಸಲು ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಗಂಗಾರಾಮ್‌ ಸಿಟ್ಟಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next