Advertisement

ಸಿಎಂ ಪರಿಹಾರ ನಿಧಿಗೆ ಮಂತ್ರಾಲಯ ಮಠದಿಂದ 10 ಲಕ್ಷ ರೂಪಾಯಿ

08:34 AM Aug 12, 2019 | keerthan |

ರಾಯಚೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹದಿಂದಾಗಿರುವ ಹಾನಿ ಭರಿಸಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಮಂತ್ರಾಲಯ ಮಠದಿಂದ 10 ಲಕ್ಷ ರೂಪಾಯಿ ಸಹಾಯಧನ ನೀಡಲಾಗಿದೆ.

Advertisement

ಮಂತ್ರಾಲಯದಲ್ಲಿ ರವಿವಾರ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರಿಂದ ಈ ನೆರವು ಘೋಷಣೆ ಮಾಡಿದರು.

ಕೃಷ್ಣಾ ಪ್ರವಾಹ ಪೀಡಿತ ಪ್ರದೇಶಗಳಿಗೆ ತಮ್ಮ‌ ಚಾತುರ್ಮಾಸ ವ್ರತ ಪೂರ್ಣ ನಂತರ ಅಂದರೆ ಸೆಪ್ಟಂಬರ್ ನಲ್ಲಿ ಭೇಟಿ ನೀಡಲಿರುವುದಾಗಿ ಶ್ರೀಗಳು ಹೇಳಿದರು.

ಈಗಾಗಲೇ ಬೆಳಗಾವಿ, ಬಾಗಲಕೋಟೆ ಸೇರಿ ವಿವಿಧ ಶಾಖಾ ಮಠಗಳ ಮೂಲಕ ಸಂತ್ರಸ್ತರಿಗೆ ಆಹಾರ ಧಾನ್ಯ ವಿತರಣೆ ಆರಂಭವಾಗಿದೆ ಎಂದು ಶ್ರೀಗಳು ಹೇಳಿದರು.

ಆಗಸ್ಟ್‌ 14 ರಿಂದ ರಾಯರ ಆರಾಧನಾ ಮಹೋತ್ಸವ ಇರುವ ಹಿನ್ನೆಲೆಯಲ್ಲಿ ಮಠದಲ್ಲಿ ಕಾರ್ಯಕ್ರಮಕ್ಕೆ ಸಿದ್ದತೆ ನಡೆಸಲಾಗುತ್ತಿದೆ ಎಂದು ಶ್ರೀ ಸುಬುಧೇಂದ್ರ ತೀರ್ಥರು ಇಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next