Advertisement

Krishna: ಕೃಷ್ಣ ಜನ್ಮಭೂಮಿ ಅಕ್ರಮ ಕಟ್ಟಡ ತೆರವಿಗೆ 10 ದಿನ ತಡೆ

08:43 PM Aug 16, 2023 | Team Udayavani |

ನವದೆಹಲಿ: ಉತ್ತರ ಪ್ರದೇಶದ ಮಥುರಾದ ಕೃಷ್ಣ ಜನ್ಮಭೂಮಿ ಸಮೀಪದಲ್ಲಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ರೈಲ್ವೆ ಅಧಿಕಾರಿಗಳು ಕೈಗೊಂಡಿರುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದನ್ನು 10 ದಿನಗಳವರೆಗೆ ನಿಲ್ಲಿಸಬೇಕು, ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ. ನ್ಯಾ. ಅನಿರುದ್ಧ ಬೋಸ್‌, ನ್ಯಾ. ಸಂಜಯ್‌ ಕುಮಾರ್‌ ಮತ್ತು ನ್ಯಾ. ಎಸ್‌ವಿಎನ್‌ ಭಟ್ಟಿ ಅವರನ್ನೊಳಗೊಂಡ ನ್ಯಾಯಪೀಠ, ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ರೈಲ್ವೆ ಇಲಾಖೆಗೆ ನೋಟಿಸ್‌ ನೀಡಿದೆ.

Advertisement

ಈಗಾಗಲೇ ಕಾರ್ಯಾಚರಣೆ ಭಾಗವಾಗಿ ಸುಮಾರು ನೂರು ಮನೆಗಳನ್ನು ಕೆಡವಲಾಗಿದೆ. ಆ ಪ್ರದೇಶದಲ್ಲಿ ಇನ್ನೂ ಅಕ್ರಮ ಕಟ್ಟಡಗಳ ಪಟ್ಟಿಯಲ್ಲಿ 70-80 ಮನೆಗಳು ಇವೆ. ಇವರ ಪೂರ್ವಿಕರು ಸುಮಾರು 1,800ನೇ ಇಸವಿಯಿಂದ ಇಲ್ಲಿ ನೆಲೆಸಿದ್ದಾರೆ ಎಂದು ಅರ್ಜಿದಾರರ ಪರ ನ್ಯಾಯವಾದಿ ಯಾಕೂಬ್‌ ಶಾ ನ್ಯಾಯಪೀಠದ ಗಮನಕ್ಕೆ ತಂದರು. ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್‌ ಆ.14ರಂದು, ರೈಲ್ವೆ ಇಲಾಖೆಯ ತೆರವು ಕಾರ್ಯಾಚರಣೆಯಿಂದ ಬಾಧಿತರಾದವರು ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವಂತೆ ಸೂಚಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next