Advertisement

ಆ್ಯಪ್‌ ಮೂಲಕ ಹೂಡಿಕೆ ಹೆಸರಿನಲ್ಲಿ 10.25 ಲಕ್ಷ ರೂ. ವಂಚನೆ

09:19 PM Apr 19, 2023 | Team Udayavani |

ಮಂಗಳೂರು: ಆ್ಯಪ್‌ ಒಂದರಲ್ಲಿ ಹಣ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸುವ ಉದ್ದೇಶದಿಂದ ಹೂಡಿಕೆ ಮಾಡಿದ್ದ 10.25 ಲಕ್ಷ ರೂ. ಹಣವನ್ನು ವಾಪಸ್‌ ನೀಡದೆ ಮೋಸ ಮಾಡಲಾಗಿದೆ ಎಂದು ಸೆನ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ದೂರುದಾರರು ಕಳೆದ ವರ್ಷ ಇನ್ಸ್‌ಸ್ಟಾಗ್ರಾಮ್‌ ಖಾತೆ ಪರಿಶೀಲನೆ ಮಾಡುತ್ತಿದ್ದಾಗ, ಕ್ರಿಕೆಟಿಗ ಸುರೇಶ್‌ ರೈನಾ ಅವರು ಬ್ರಾಂಡ್‌ ಅಂಬಾಸಿಡರ್‌ ಆಗಿದ್ದ ಆ್ಯಪ್‌ ನೋಡಿದ್ದರು. ಅದರಲ್ಲಿ ಹಣ ಹೂಡಿಕೆಯಿಂದ ಲಾಭ ಗಳಿಸಬಹುದು ಎಂದು ರೈನಾ ಪ್ರಚಾರ ಮಾಡಿರುವುದು ಕಂಡುಬಂದಿದೆ.

ಆ್ಯಪ್‌ನಲ್ಲಿ ಹಣ ಹೂಡಿಕೆ ಮಾಡಿ ಲಾಭ ಗಳಿಸಬಹುದು ಎಂದು ಮನಗಂಡು 2022ರ ಆಗಸ್ಟ್‌ನಲ್ಲಿ 1 ಲಕ್ಷ ರೂ. ಹೂಡಿಕೆ ಮಾಡಿದ್ದರು. ಅನಂತರ ಹಂತ ಹಂತವಾಗಿ 60,000 ರೂ., 70,000 ರೂ., 3.80 ಲಕ್ಷ ರೂ., 4.15 ಲಕ್ಷ ರೂ. ಹೀಗೆ ಒಟ್ಟು 10.25 ಲಕ್ಷ ರೂ. ಹೂಡಿಕೆ ಮಾಡಿದ್ದರು. ಮೊದಲು ಲಾಭಾಂಶ ನೀಡಿದ್ದ ಆ್ಯಪ್‌ನಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಪ್ಲಿಕೇಷನ್‌ನಲ್ಲಿ ಇದ್ದ ಮೊಬೈಲ್‌ ನಂಬರ್‌ಗೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಆಗ ಮೋಸ ಹೋಗಿರುವುದು ಅರಿವಿಗೆ ಬಂದಿದೆ.
ಆರೋಪಿಗಳಾದ ಅಬ್ಟಾಸ್‌ ಹುಸೇನ್‌ ಶಾಹಿಲ್‌, ವೈಭವ್‌ ಗೋವಿಂದ್‌ ಸಾವಂತ್‌ ಮತ್ತು ಲೋಕೇಶ್‌ ಕಿಶೋರ್‌ ಜಾದವ್‌ ನಕಲಿ ವೆಬ್‌ಸೈಟ್‌ ಅನ್ನು ಇನ್‌ಸ್ಟಾ ಗ್ರಾಮ್‌ನಲ್ಲಿ ಹಾಕಿ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next