Advertisement

ಶಾಸಕನ ವಿರುದ್ಧ 1 ರೂ. ಮಾನನಷ್ಟ ಮೊಕದ್ದಮೆ

12:00 AM Jul 25, 2019 | Lakshmi GovindaRaj |

ಯಲಹಂಕ: ಜೆಡಿಎಸ್‌ ಶಾಸಕ ಶ್ರೀನಿವಾಸ್‌ಗೌಡ ವಿರುದ್ಧ 1 ರೂ. ಮಾನನಷ್ಟ ಮೊಕದ್ದಮೆ ಹಾಗೂ ಕ್ರಿಮಿನಲ್‌ ದೂರು ದಾಖಲಿಸಿರುವುದಾಗಿ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, “ಜೆಡಿಎಸ್‌ ಬಿಟ್ಟು ಬಿಜೆಪಿ ಸೇರಲು ತಮಗೆ 5 ಕೋಟಿ ರೂ. ನೀಡಿದ್ದರು ಎಂದು ಶಾಸಕ ಶ್ರೀನಿವಾಸ್‌ಗೌಡ ಅವರು ಈ ಹಿಂದೆ ಆರೋಪ ಮಾಡಿದ್ದರು.

Advertisement

ಆದಾದ ಬಳಿಕ ಎಸಿಬಿ ವಿಚಾರಣೆ ವೇಳೆ, “ನಾನು ಸುಳ್ಳು ಹೇಳಿದೆ’ ಎಂದು ಹೇಳಿಕೆ ನೀಡುವ ಮೂಲಕ ಪ್ರಕರಣ ಹಿಂಪಡೆದಿದ್ದರು. ಇತ್ತೀಚೆಗೆ ವಿಧಾನಸಭೆ ಕಲಾಪದ ವೇಳೆ ಮತ್ತೂಮ್ಮೆ ಅದೇ ಆರೋಪ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ 1 ರೂ. ಮಾನನಷ್ಟ ಮೊಕದ್ದಮೆ ಹಾಗೂ ಖಾಸಗಿ ಕ್ರಿಮಿನಲ್‌ ಕೇಸು ದಾಖಲಿಸಿದ್ದೇನೆ. ಜತೆಗೆ ಈ ಬಗ್ಗೆ ಸ್ಪೀಕರ್‌ ಬಳಿ ಹಕ್ಕುಚುತಿ ಮಂಡಿಸಿದ್ದೇನೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next