Advertisement

Lokayukta: ಬೆಸ್ಕಾಂ ಕೆಲಸಕ್ಕೆ 1.5 ಲಕ್ಷ ಲಂಚ: ಎಇಇ ಲೋಕಾಯುಕ್ತ ಬಲೆಗೆ

12:36 PM Sep 27, 2023 | Team Udayavani |

ಬೆಂಗಳೂರು: ಕೆಲಸ ಮಾಡಿಸಿಕೊಡಲು 1.50 ಲಕ್ಷ ರೂ. ಲಂಚ ಪಡೆಯುತ್ತಿದ್ದ ಇಂದಿರಾನಗರ ಬೆಸ್ಕಾಂನ ಎಇಇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಇಂದಿರಾನಗರದಲ್ಲಿರುವ ಬೆಸ್ಕಾಂ ವಿಜೆಲೆನ್ಸ್‌ನ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಯೋಗೇಶ್‌ ಬಂಧಿತ ಆರೋಪಿ.

ಮಾರತ್‌ ಹಳ್ಳಿಯ ಶ್ರೀಧರ್‌ ಆಚಾರ್‌ ಎಂಬುವವರು ಬೆಸ್ಕಾಂ ಸಂಬಂಧಿತ ಕೆಲಸವೊಂದಕ್ಕೆ ಅರ್ಜಿ ಸಲ್ಲಿಸಿದ್ದರು. ಇದನ್ನು ಗಮನಿಸಿದ ಯೋಗೇಶ್‌ ಕೆಲಸ ಮಾಡಿಸಿಕೊಡಲು 1.70 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು. ನಂತರ ಮಾತು-ಕತೆ ನಡೆಸಿ 1.50 ಲಕ್ಷ ರೂ. ನೀಡುವಂತೆ ಸೂಚಿಸಿದ್ದರು. ಇತ್ತ ಲಂಚ ನೀಡಲು ಇಚ್ಛಿಸದ ಶ್ರೀಧರ್‌ ಆಚಾರ್‌ ಈ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಮಂಗಳವಾರ ಶ್ರೀಧರ್‌ ಆಚಾರ್‌ನಿಂದ ಆರೋಪಿ ಯೋಗೇಶ್‌ ಕಚೇರಿಯಲ್ಲಿ 1.50 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಆತನನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next