Advertisement

ಮಲೆ ಮಹದೇಶ್ವರನ ಹುಂಡಿಯಲ್ಲಿ 29 ದಿನಗಳಲ್ಲಿ 1.29ಕೋಟಿ ರೂ ಸಂಗ್ರಹ

11:08 AM Oct 30, 2021 | Team Udayavani |

ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಹುಂಡಿಯಲ್ಲಿ ಕಳೆದ 29 ದಿನಗಳಲ್ಲಿ 1.29 ಕೋಟಿ ನಗದು, 44ಗ್ರಾಂ ಚಿನ್ನ ಮತ್ತು 1.300 ಕೆ.ಜಿ ಬೆಳ್ಳಿಯ ಪದಾರ್ಥಗಳು ಸಂಗ್ರಹವಾಗಿವೆ.

Advertisement

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಖಾಸಗಿ ಬಸ್ ನಿಲ್ದಾಣದ ಸಮೀಪದ ವಾಣಿಜ್ಯ ಸಂಕೀರ್ಣದಲ್ಲಿ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಪ್ರಾರಂಭವಾದ ಹುಂಡಿ ಎಣಿಕೆ ಪ್ರಕ್ರಿಯೆಯು ರಾತ್ರ 7 ಗಂಟೆವರೆಗೂ ಜರುಗಿತು. ಹುಂಡಿ ಎಣಿಕೆ ಪ್ರಕ್ರಿಯೆಯು ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಶ್ರೀಗಳ ದಿವ್ಯಸಾನಿಧ್ಯದಲ್ಲಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮಕ್ಷಮದಲ್ಲಿ ಸಿಸಿಟಿವಿ ಕಣ್ಗಾವಲಿನಲ್ಲಿ ಜರುಗಿತು.

ಈ ಬಾರಿಯ ಹುಂಡಿ ಎಣಿಕೆಯಲ್ಲಿ ಕಳೆದ 29 ದಿನಗಳಲ್ಲಿ 1,29,82,174(ಒಂದು ಕೋಟಿ ಇಪ್ಪತ್ತ ಒಂಭತ್ತು ಲಕ್ಷದ ಎಂಭತ್ತೆರೆಡು ಸಾವಿರದ ನೂರ ಎಪ್ಪತ್ತ ನಾಲ್ಕು) ರೂ ನಗದು, 44ಗ್ರಾಂ ಚಿನ್ನದ ಪದಾರ್ಥಗಳು ಮತ್ತು 1ಕೆ.ಜಿ.300ಗ್ರಾಂ ಬೆಳ್ಳಿಯ ಪದಾರ್ಥಗಳು ಸಂಗ್ರಹವಾಗಿವೆ.

ಹುಂಡಿ ಎಣಿಕೆ ಪ್ರಕ್ರಿಯೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ, ಉಪಕಾರ್ಯದರ್ಶಿ ಬಸವರಾಜು, ಅಭಿಯಂತರ ಮನ್ವಾಚಾರ್, ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿ, ಮಹದೇಶ್ವರ ಬೆಟ್ಟ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಕೆಯ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಮ.ಬೆಟ್ಟ ಪೊಲೀಸ್ ಇಲಾಖಾ ಅಧಿಕಾರಿಗಳು ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು.

ಯಥಾಸ್ಥಿತಿಯತ್ತ ಆದಾಯ
ಕೊರೋನಾ ಪ್ರಾರಂಭವಾದ ಬಳಿಕ ಲಾಕ್‍ಡೌನ್ ಹಿನ್ನೆಲೆ ದೇವಾಲಯ ಬಂದ್, ಅಮಾವಾಸ್ಯೆ ಪೂಜಾ ಕೈಂಕರ್ಯಗಳ ವೇಳೆ ಭಕ್ತಾದಿಗಳ ಪ್ರವೇಶ ನಿಷಿದ್ಧ ಸೇರಿದಂತೆ 20 ತಿಂಗಳಿನಿಂದ ಮಾದಪ್ಪನ ಆದಾಯದಲ್ಲಿ ಗಣನೀಯವಾಗಿ ಕುಂಠಿತವಾಗಿತ್ತು. ಇದೀಗ ಒಂದು ತಿಂಗಳ ಅವಧಿಗೆ ಸರಿ ಸುಮಾರು 1.3ಕೋಟಿ ಆದಾಯ ಸಂಗ್ರಹವಾಗುತ್ತಿರುವುದು ಕೊರೋನಾ ಮುಂಚೆ ಬರುತ್ತಿದ್ದಂತಹ ಆದಾಯವಾಗಿದೆ. ಒಟ್ಟಾರೆ 20 ತಿಂಗಳ ನಂತರ ಮಾದಪ್ಪನ ಹುಂಡಿ ಆದಾಯ, ಸೇವೆಗಳು ಆದಾಯ ಯಥಾಸ್ಥಿತಿಯತ್ತ ಬರುತ್ತಿದೆ. ಎಣ್ಣೆಮಜ್ಜನ ಸೇವೆ, ಹಬ್ಬ-ಹರಿದಿನಗಳಂದು ಕೂಡ ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿದಲ್ಲಿ ಆದಾಯ ಮತ್ತಷ್ಟು ಏರಿಕೆಯಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next