Advertisement

ಕಂಚು ಗೆದ್ದು ಕುಸ್ತಿಪಟು ಪೂನಿಯಾಗೆ ಭರ್ಜರಿ ಉಡುಗೊರೆ ಘೋಷಿಸಿದ ಹರಿಯಾಣ ಸಿಎಂ

05:42 PM Aug 07, 2021 | Team Udayavani |

ನವದೆಹಲಿ : ಟೋಕಿಯೊ ಒಲಿಪಿಕ್ಸ್ ನಲ್ಲಿ ಕಂಚು ಪದಕ ಗೆದ್ದಿರುವ ಬಜರಂಗ್ ಪೂನಿಯಾ ಅವರಿಗೆ ಹರಿಯಾಣ ಸರ್ಕಾರ ಭರ್ಜರಿ ಉಡುಗೊರೆ ಘೋಷಿಸಿದೆ.

Advertisement

ಭಾರತದ ಕುಸ್ತಿಪಟು ಬಜರಂಗ್ ಪೂನಿಯಾ ಇಂದು  ನಡೆದ ಕಂಚಿನ ಪದಕಕ್ಕಾಗಿನ ಹೋರಾಟದಲ್ಲಿ ಕಜಕಿಸ್ತಾನದ ದೌಲತ್ ನಿಯಾಜ್‌ಬೆಕೋವ್ ವಿರುದ್ಧ ಗೆಲುವು ದಾಖಲಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

65 ಕೆಜಿ ವಿಭಾಗದ ಫ್ರೀಸ್ಟೈಲ್ ಪಂದ್ಯದಲ್ಲಿ ಬಜರಂಗ್ ಪೂನಿಯಾ ಕಜಕಿಸ್ತಾನದ ದೌಲತ್ ನಿಯಾಜ್‌ಬೆಕೋವ್ ವಿರುದ್ಧ8-0 ಅಂತರದ ಭರ್ಜರಿ ಗೆಲುವು ಸಾಧಿಸಿದರು. ಆ ಮೂಲಕ ಭಾರತಕ್ಕೆ ಮತ್ತೊಂದು ಕಂಚಿನ ಪದಕ ತಂದುಕೊಂಟ್ಟಿದ್ದಾರೆ. ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಇದು 6ನೇ ಪದಕವಾಗಿದೆ.

ಬಜರಂಗ್ ಪುನಿಯಾ ಅವರ ಸಾಧನೆಗೆ ಅಭಿನಂದಿಸಿರುವ ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಕ್ ಖಟ್ಟರ್ ಅವರು 2.5 ಕೋಟಿ ರೂ. ನಗದು ಬಹುಮಾನ ಹಾಗೂ ಸರ್ಕಾರಿ ನೌಕರಿ ನೀಡುವುದಾಗಿ ಘೋಷಿಸಿದ್ದಾರೆ.

ಪದಕ ಗೆದ್ದ ಪುನಿಯಾಗೆ ಅಭಿನಂದಿಸಿರುವ ಮುಖ್ಯಮಂತ್ರಿಗಳು, ನೀನು ಕೇವಲ ಪದಕ ಮಾತ್ರ ಗೆದ್ದಿಲ್ಲ ಬದಲಾಗಿ ಇಡೀ ದೇಶದ ಜನರ ಗೃದಯ ಗೆದ್ದಿದ್ದಿಯಾ ಎಂದು ಟ್ವಿಟ್ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next