Advertisement

ರಸ್ತೆ ಬದಿ ಕಸ ಬಿಸಾಕಿದರೆ, ಮನೆ ಬಾಗಿಲಿಗೆ ಬರುತ್ತೆ !

10:01 AM Apr 03, 2019 | Team Udayavani |

ಸ್ವಚ್ಛ ಮಂಗಳೂರು ಜಾಗೃತಿ ಮಹಾನಗರ : ರಸ್ತೆ ಬದಿ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಕಸ ಬಿಸಾಕಿದರೆ ಕೆಲವೇ ಗಂಟೆಗಳಲ್ಲಿ ಅದೇ ಕಸ ನಿಮ್ಮ ಮನೆ ಬಾಗಿಲಿಗೆ ಬರಬಹುದು. ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ಉದ್ದೇಶದಿಂದ ಬಿಸಾಡಿದ ಕಸವನ್ನು ಅವರ ಮನೆ ಬಾಗಿಲಿಗೆ ತಲುಪಿಸಿ ಜಾಗೃತಿ ಮೂಡಿಸುವ ಕೆಲಸವನ್ನು ಸ್ವಚ್ಛ ಮಂಗಳೂರು ಆಭಿಯಾನದ ಕಾರ್ಯಕರ್ತರು ಕಳೆದ ಕೆಲವು ದಿನಗಳಿಂದ ಮಾಡುತ್ತಿದ್ದಾರೆ.

Advertisement

ನಗರವನ್ನು ಸ್ವಚ್ಛ ಮಂಗಳೂರು ಮಾಡಬೇಕು ಎಂದು ಮನಪಾ ಸಹಿತ ಇನ್ನಿತರ ಸಂಘಟನೆಗಳು ಹಲವು ವರ್ಷ ಗಳಿಂದ ಶ್ರಮಿಸುತ್ತಿವೆ. ಈ ನಿಟ್ಟಿನಲ್ಲಿ ಕಿಂಚಿತ್ತು ಕೊಡುಗೆ ನೀಡಬೇಕು ಎಂಬ ದೃಷ್ಟಿಯಿಂದ ‘ಸ್ವಚ್ಛ ಯೋಧರು’ ಎಂಬ ವಾಟ್ಸಪ್‌ ಗ್ರೂಪ್‌ ರಚನೆ ಮಾಡುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಈ ಗ್ರೂಪ್‌ನಲ್ಲಿ ಈಗಾಗಲೇ 70ಕ್ಕೂ ಮಿಕ್ಕಿ ಸದಸ್ಯರಿದ್ದು, ಸಾರ್ವಜನಿಕರು ಹೆಚ್ಚಾಗಿ ಕಸ ಹಾಕುವ ಪ್ರದೇಶದಲ್ಲಿ ಬೆಳಗ್ಗೆ ಮತ್ತು ರಾತ್ರಿ ಗ್ರೂಪ್‌ ಸದಸ್ಯರು ಕಾವಲು ಕಾಯುತ್ತಾರೆ. ಕಸ ಹಾಕುವ ಸಮಯದಲ್ಲಿ ಅವರಿಗೆ ತಿಳಿ ಹೇಳಲಾಗುತ್ತದೆ. ಕೆಲವು ಬಾರಿ ಕಣ್ತಪ್ಪಿಸಿ ಕಸ ಹಾಕಿದರೆ, ಆ ಕಸದ ರಾಶಿಯಲ್ಲೇ ಕೆಲವೊಂದು ದಾಖಲೆಗಳ ಝೆರಾಕ್ಸ್‌ ಪ್ರತಿ, ಚೀಟಿಗಳು ಸಹಿ ತ ಇನ್ನಿತರ ಮಾಹಿತಿಗಳಿದ್ದರೆ ಇದೇ ಆಧಾರದ ಮೇಲೆ ಆ ಮನೆಯನ್ನು ಸಂಪರ್ಕಿಸಿ ಅವರ ಮನೆಗೆ ಕಸ ತಲುಪಿಸುತ್ತಾರೆ.

ರಾಮಕೃಷ್ಣ ಮಠದ ಏಕಗಮ್ಯಾನಂದ ಸ್ವಾಮೀಜಿ ಅವರು ಈ ಬಗ್ಗೆ ‘ಸುದಿನ’ಕ್ಕೆ ಪ್ರತಿಕ್ರಿಯಿಸಿ ಕಳೆದ ಕೆಲವು ವರ್ಷಗಳಿಗೆ ಹೋಲಿಕೆ ಮಾಡಿದರೆ ರಸ್ತೆ ಬದಿ ಕಸ ಹಾಕುವವರ ಪ್ರಮಾಣ ತುಂಬಾ ಕಡಿಮೆಯಾಗಿದೆ. ನಗರಕ್ಕೆ ಆ್ಯಂಟನಿ ಮ್ಯಾನೇಜ್‌ ಮೆಂಟ್‌ ಬರುವ ಮೊದಲು ಸುಮಾರು 950 ಕಡೆಗಳಲ್ಲಿ ರಸ್ತೆ ಬದಿಗಳಲ್ಲಿ ಕಸ ಹಾಕು ತ್ತಿದ್ದರು. ಸದ್ಯ ಸುಮಾರು 50 ಜಾಗಗಳಿಗೆ ಇಳಿದಿದೆ. ರಾಮಕೃಷ್ಣ ಮಿಷನ್‌ ವತಿಯಿಂದ ಸ್ವಚ್ಛತೆಯ ಅರಿವು ಮೂಡಿಸುತ್ತಿದ್ದು, ನಗರದ ಹೃದಯಭಾಗಗಳಲ್ಲಿ ಕಸ ಹಾಕುವವರ ಸಂಖ್ಯೆ ಮತ್ತಷ್ಟು ಕಡಿಮೆಯಾಗಿದೆ. ರಸ್ತೆ ಬದಿಯಲ್ಲಿ ತ್ಯಾಜ್ಯಗಳನ್ನು ಹಾಕುತ್ತಿರುವವರು ಹೆಚ್ಚಾಗಿ ಹೊರಗಿನ ಊರಿನ ಮಂದಿಯಾಗಿದ್ದಾರೆ ಎಂದು ಹೇಳುತ್ತಾರೆ.

ನಿವೃತ್ತರ ಪ್ರೋತ್ಸಾಹ
ಸ್ವಚ್ಛತೆಯ ಫಾಲೋಆಪ್‌ ಕೆಲಸಕ್ಕೆ ವಿವಿಧ ಕ್ಷೇತ್ರಗಳಲ್ಲಿ ನಿವೃತ್ತಿ ಹೊಂದಿದ ವ್ಯಕ್ತಿಗಳು ಕೂಡ ಪ್ರೋತ್ಸಾಹ ನೀಡುತ್ತಿದ್ದಾರೆ. ಬ್ಲ್ಯಾಕ್ ಸ್ಪಾಟ್‌ ಸಹಿತ ಸಾರ್ವಜನಿಕರು ಹೆಚ್ಚಾಗಿ ಕಸ ಬಿಸಾಕುವಂತಹ ಜಾಗಗಳಲ್ಲಿ ಸ್ವಚ್ಛ ಮಂಗಳೂರು ಕಾರ್ಯಕರ್ತರಲ್ಲದೆ ನಿವೃತ್ತರು ಕೂಡ ಕಾವಲು ಕಾಯುತ್ತಾರೆ.

ವಾಟ್ಸಾಪ್‌ ಗ್ರೂಪ್‌ ರಚನೆ
ಸಾರ್ವಜನಿಕರಿಗೆ ಸ್ವಚ್ಛತೆಯ ಅರಿವು ಮೂಡಿಸಲು ಈ ಅಭಿಯಾನ ಪ್ರಾರಂಭಿಸಲಾಗಿದೆ. ವಾರದಲ್ಲಿ ಒಂದು ಬಾರಿ ಶ್ರಮದಾನ ನಡೆದ ಬಳಿಕ ಮುಂದಿನ ಒಂದು ವಾರಗಳ ಕಾಲ ಫಾಲೋಅಪ್‌ ಗಾಗಿ ಸ್ವಚ್ಛ ಯೋಧರು ಎಂಬ ವಾಟ್ಸಪ್‌ ಗ್ರೂಪ್‌ ರಚಿಸಿದ್ದೇವೆ.
ಸುಧೀರ್‌ ನೊರೊನ್ಹಾ,
ಸ್ವಚ್ಛ ಮಂಗಳೂರು ಅಭಿಯಾನ
ಕಾರ್ಯಕರ್ತ

Advertisement

ಕಾರ್ಯಕರ್ತರ ಬೆಂಬಲ
ರಾಮಕೃಷ್ಣ ಮಿಷನ್‌ ಸ್ವಚ್ಛತಾ ಆಂದೋಲನದ ಯುವಕರು ಸ್ವಚ್ಛಯೋಧರು ಎಂಬ ಗ್ರೂಪ್‌ ಮುಖೇನ ಸ್ವಚ್ಛತಾ ಅಭಿಯಾನ ನಡೆಸುತ್ತಿದ್ದಾರೆ. ನಗರ ಸ್ವಚ್ಛವಾಗುತ್ತಿದೆ. ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಕಸದ ಬ್ಲ್ಯಾಕ್ ಸ್ಪಾರ್ಟ್‌ಗಳ ಸಂಖ್ಯೆ ಕಡಿಮೆಯಾಗಿದೆ. ಸಾರ್ವಜನಿಕರು, ಕಾರ್ಯಕರ್ತರ ಬೆಂಬಲವೂ ಇದಕ್ಕೆ ಕಾರಣ.
– ಏಕಗಮ್ಯಾನಂದ ಸ್ವಾಮೀಜಿ,
ಸ್ವಚ್ಛತಾ ಅಭಿ ಯಾನ ಸಂಚಾಲಕ,
ರಾಮಕೃಷ್ಣ ಮಠ ಮಂಗಳೂರು

ಸ್ವಚ್ಛತೆಗೆ ಅ. 2ರ ಗುರಿ
ಅಕ್ಟೋಬರ್‌ 2ರ ವೇಳೆಗೆ ನಗರದ ಯಾವುದೇ ಪ್ರದೇಶದಲ್ಲಿ ಕಸ ಇರಬಾರದು ಎಂಬ ಗುರಿಯನ್ನು ರಾಮಕೃಷ್ಣ ಮಿಷನ್‌ ಈಗಾಗಲೇಇಟ್ಟುಕೊಂಡಿದೆ. ವಾರದಲ್ಲಿ ನಗರದ ಎರಡು ಕಡೆಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸುವ ಯೋಜನೆಯನ್ನು ಮಠದ ಸ್ವತ್ಛತಾ ತಂಡ ನಿರ್ವಹಿಸುತ್ತಿದ್ದು, ಈಗಾಗಲೇ ಮನೆ ಮನೆಗಳಿಗೆ ಕರಪತ್ರಗಳ ಮೂಲಕ ಕಸ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next