Advertisement

ಮಂಗಳೂರು: ನೀರು ಸ್ಥಗಿತ

11:12 AM May 20, 2019 | keerthan |

ಮಂಗಳೂರು: ರೇಷನಿಂಗ್‌ ಪ್ರಕಾರ ಸೋಮವಾರ ಬೆಳಗ್ಗೆ 6ರಿಂದ ಮೇ 24ರ ಬೆಳಗ್ಗೆ 6ರ ವರೆಗೆ ನಗರದಲ್ಲಿ ನೀರು ಸರಬರಾಜು ಸ್ಥಗಿತಗೊಳ್ಳಲಿದೆ.

Advertisement

ಮೇ 16ರ ಬೆಳಗ್ಗೆ 6ರಿಂದ ಮೇ 20ರ ಬೆಳಗ್ಗೆ 6ರ ವರೆಗೆ ನೀರು ಸರಬರಾಜು ಮಾಡಲಾಗಿತ್ತು. ನಾಲ್ಕು ದಿನಗಳಿಂದ ಪಾಲಿಕೆ ವತಿಯಿಂದ ಟ್ಯಾಂಕರ್‌ ಮೂಲಕ ಎತ್ತರದ ಪ್ರದೇಶಗಳಿಗೆ ನೀರು ಪೂರೈಕೆ ಮಾಡಲಾಗಿತ್ತು.

ತುಂಬೆಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಕಡಿಮೆಯಾಗು ತ್ತಿದ್ದು, ರವಿವಾರ ಬೆಳಗ್ಗೆ 3.52 ಮೀ. ನಷ್ಟಿದ್ದ ನೀರಿನ ಮಟ್ಟ ಸಂಜೆ ವೇಳೆಗೆ 3.47 ಮೀ.ಗೆ ಇಳಿದಿದೆ.

ಮಳೆಗಾಗಿ ಪ್ರಾರ್ಥನೆ
ನೀರಿನ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ರವಿವಾರ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡ ಮಂಗಳೂರು ಧರ್ಮ ಪ್ರಾಂತ ವ್ಯಾಪ್ತಿಯ ಚರ್ಚ್‌, ಚಾಪೆಲ್‌ಗ‌ಳಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಿಷಪ್‌ ರೆ| ಡಾ| ಪೀಟರ್‌ ಪಾವ್‌ ಸಲ್ಡಾನ್ಹಾ ಅವರು ರವಿವಾರ ಕಟೀಲು ಸಂತ ಜಾಕೊಬ್‌ ಚರ್ಚ್‌ನಲ್ಲಿ ಮಳೆಗಾಗಿ ಪ್ರಾರ್ಥಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next