Advertisement

ಬಜಿರೆ: ಗಾಂಜಾ ಸಾಗಾಟ; ಓರ್ವನ ಬಂಧನ

09:58 PM May 01, 2023 | Team Udayavani |

ವೇಣೂರು: ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪದಲ್ಲಿ ಕಡಬ ತಾಲೂಕಿನ ಸವಣೂರು ಹಿದ್ಯಾಡಿ ನಿವಾಸಿ ಪ್ರಸಾದ್‌ ಯಾನೆ ಪಚ್ಚು ಎಂಬಾತನನ್ನು ಬೆಳ್ತಂಗಡಿ ವೃತ್ತ ನಿರೀಕ್ಷಕರ ತಂಡ ಬಂಧಿಸಿದೆ.

Advertisement

ಬಜಿರೆ ಗ್ರಾಮದ ಹಂದೇವು ಮೂರು ಮಾರ್ಗದ ಬಳಿ ವೃತ್ತ ನಿರೀಕ್ಷಕ ಶಿವಕುಮಾರ್‌ ಬಿ., ಹೆಡ್‌ ಕಾನ್‌ಸ್ಟೆಬಲ್‌ಗ‌ಳಾದ ಇಬ್ರಾಹಿಂ, ಅಭಿಜಿತ್‌ ಕುಮಾರ್‌, ವಿಜಯ ಕುಮಾರ್‌, ಕಾನ್‌ಸ್ಟೆಬಲ್‌ ಚೌಡಪ್ಪ ಅವರಿದ್ದ ತಂಡ ವಾಹನ ತಪಾಸಣೆ ಮಾಡುತ್ತಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯು 37 ಸಾ. ರೂ. ಮೌಲ್ಯದ 500 ಗ್ರಾಂ ಗಾಂಜಾವನ್ನು ಸಾಗಿಸುತ್ತಿದ್ದ. ಆತನ ವಿರುದ್ಧ ಪುತ್ತೂರು, ಕಡಬ, ಉಪ್ಪಿನಂಗಡಿ ಸಹಿತ ವಿವಿಧೆಡೆಗಳಲ್ಲಿ ಈಗಾಗಲೇ 13 ಕೇಸುಗಳಿದ್ದು, ರೌಡಿಶೀಟರ್‌ ಆಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next