Advertisement

ಕರೂರಿನಲ್ಲಿ ವಾಹನ ಪೂಜ

05:50 PM Nov 05, 2021 | Adarsha |

ಸಾಗರ: ತಾಲೂಕಿನ ಕರೂರಿನ ದುರ್ಗಾಂಬಾಹಾಗೂ ಮಹಾ ಗಣಪತಿ ದೇವಸ್ಥಾನದಲ್ಲಿದೀಪಾವಳಿಯ ಅಮಾವಾಸ್ಯೆ ಹಾಗೂ ಪಾಡ್ಯದದಿನ ಪೂಜೆ ಹೊಂದುವ ವಾಹನಗಳ ಮಾಲೀಕರಿಗೆಶ್ರೇಯಸ್ಸಾಗುತ್ತದೆ ಎಂಬ ಪ್ರತೀತಿಯ ಹಿನ್ನೆಲೆಯಲ್ಲಿಗುರುವಾರ ನೂರಾರು ವಾಹನಗಳ ಪೂಜೆ ನಡೆಯಿತು.

Advertisement

ಹೂವಿನ ದಂಡೆಗಳಿಂದ ಅಲಂಕೃತವಾದಕ್ಯಾಂಟರ್‌, ವ್ಯಾನ್‌, ಬೈಕ್‌, ಕಾರುಗಳಿಗೆ ಪೂಜೆನೆರವೇರಿತು.ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ತುಮರಿಗ್ರಾಪಂ ಮಾಜಿ ಅಧ್ಯಕ್ಷ ಜಿ.ಟಿ. ಸತ್ಯನಾರಾಯಣಕರೂರು ಮಾತನಾಡಿ, ಐದು ದಶಕಗಳಹಿಂದಿನಿಂದಲೂ ಈ ಪ್ರವೃತ್ತಿ ಕಂಡುಬಂದಿದೆ.

ಇಲ್ಲಿನ ದೇವಸ್ಥಾನಗಳಲ್ಲಿ ನಡೆದ ವಾಣಿಜ್ಯ ವಾಹನಗಳಪೂಜೆಯ ನಂತರ ಮುಂದಿನ ವರ್ಷಗಳಲ್ಲಿಒಂದಕ್ಕೆರಡು ವಾಹನಗಳಾಗುತ್ತವೆ. ಆಕಸ್ಮಿಕಗಳು,ಅವಘಡಗಳು ಆಗುವುದಿಲ್ಲ. ವಾಹನ ಮಾಲೀಕರಿಗೆಶ್ರೇಯಸ್ಸಾಗುತ್ತದೆ ಎಂಬ ನಂಬಿಕೆಯಿದೆ. ಅದುನಿಜವಾಗುತ್ತಿರುವುದರಿಂದಲೇ ಈ ಸಮಯದಪೂಜೆಗೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ ಎಂದರು.ಈ ಹಿಂದೆ ಇದೇ ದೇವಸ್ಥಾನಗಳಲ್ಲಿ ಅವತ್ತಿನ ಕಾಲದಎತ್ತಿನ ಗಾಡಿಗಳ ಪೂಜೆ ನಡೆಯುತ್ತಿತ್ತು.

ಬದಲಾದಕಾಲಘಟ್ಟದಲ್ಲಿ ಬೈಕ್‌ ಹಾಗೂ ಕಾರು, ಟ್ರಕ್‌,ಜೀಪ್‌ ಮೊದಲಾದವುಗಳ ಪೂಜೆ ನಡೆಯುತ್ತಿದೆ.ಇಲ್ಲಿನ ದೇವಸ್ಥಾನಗಳನ್ನು ಮೂರು ಸುತ್ತು ಸುತ್ತಿ,ಗ್ರಾಮಸ್ಥರಿಗೆಲ್ಲ ಸಿಹಿ ಹಂಚಿ ಪೂಜೆ ಸಲ್ಲಿಸಲಾಗುತ್ತದೆ.ದೊಡ್ಡಬ್ಬದ ಸಂದರ್ಭದ ಎರಡು ದಿನ ಈ ಪೂಜೆನಡೆಯುತ್ತದೆ ಎಂದು ಅವರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next