Advertisement

ಆತ್ಮ-ಜ್ಞಾನಜ್ಯೋತಿಯಿಂದ ಲೋಕ ಬೆಳಗಿದವರು ಮಹಾವೀರರು

02:33 PM Nov 05, 2021 | Adarsha |

ರಿಪ್ಪನ್‌ಪೇಟೆ: ಮಹಾವೀರರಂತಹ ಮಹಾಪುರುಷರು ತಮ್ಮ ಆತ್ಮಜ್ಯೋತಿ, ಜ್ಞಾನಜ್ಯೋತಿಮೂಲಕ ಲೋಕವನ್ನು ಬೆಳಗಿಸಿದರು ಎಂದು ಪ|ಪೂ|ಜಗದ್ಗುರು ಸ್ವಸ್ತಿಶ್ರೀ ಡಾ| ದೇವೇಂದ್ರಕೀರ್ತಿ ಭಟ್ಟಾರಕಮಹಾಸ್ವಾಮೀಜಿಗಳವರು ಹೇಳಿದರು.

Advertisement

ಹೊಂಬುಜ ಜೈನಮಠದಲ್ಲಿ ಗುರುವಾರಭಗವಾನ್‌ ಶ್ರೀ ಮಹಾವೀರ ಸ್ವಾಮಿಯ 2548ನೇಮೋಕ್ಷ ಕಲ್ಯಾಣ ದಿವ್ಯ ಸ್ಮರಣೆಯಲ್ಲಿ ಮಹಾವೀರಸ್ವಾಮಿಗೆ ನಿರ್ವಾಣ ಲಾಡು ಅರ್ಪಿಸಿ ಅವರುಆಶೀರ್ವಚನ ನೀಡಿದರು.ಪ್ರತಿಯೊಬ್ಬ ಮನುಷ್ಯನಲ್ಲಿ ಬದುಕಿನ ಸ್ಥಿತಿ, ಗತಿಮೀರಿದ ಮನಸ್ಸಿದೆ. ದೇವರ ಮೇಲಿನ ನಂಬಿಕೆ ಮತ್ತುವಿಶ್ವಾಸಗಳಿಂದ ಪ್ರತಿಯೊಬ್ಬರೂ ಜೀವಿಸಬೇಕು.ಬಡತನ ಇರಲಿ, ಸಿರಿತನ ಇರಲಿ ನಮ್ಮ ಬದುಕನ್ನುಸ್ವರ್ಗವಾಗಿಸುವುದು, ನರಕವಾಗಿಸುವುದು ನಮ್ಮಕೈಯಲ್ಲಿದೆ.

ದೇವರ ಮೇಲಿನ ನಂಬಿಕೆ ಮತ್ತುವಿಶ್ವಾಸಗಳಿಂದ ಪ್ರತಿಯೊಬ್ಬರೂ ಮುಗª ಮನಸ್ಸಿನಮಕ್ಕಳಂತೆ ಜೀವಿಸಬೇಕು ಎಂದರು. ಬೆಳಗಿನ ಜಾವಭಗವಾನ್‌ ಶ್ರೀ ಮಹಾವೀರ ಸ್ವಾಮಿಗೆ ಪಂಚಾಮೃತಅಭಿಷೇಕ ಪೂಜೆ ಮತ್ತು ನಿರ್ವಾಣ ಲಾಡು ಅರ್ಪಿಸಿಭಗವಾನ್‌ ಮಹಾವೀರ ಸ್ವಾಮಿಯ 2548ನೇಮೋಕ್ಷ ಕಲ್ಯಾಣ ದಿವ್ಯ ಸ್ಮರಣೆ ಮಾಡಲಾಯಿತು.ರಾಜ್ಯ, ಹೊರರಾಜ್ಯ ಹಾಗೂ ಊರಿನ ಭಕ್ತಾದಿಗಳುಪೂಜಾ ಕಾರ್ಯದಲ್ಲಿ ಭಾಗಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next