Advertisement

ಪಣಜಿ: ಕೇಂದ್ರ ಸಚಿವರಿಂದ ಜುವಾರಿ ಸೇತುವೆ ಉದ್ಘಾಟನೆ, ವಾಹನ ಸಂಚಾರಕ್ಕೆ ಮುಕ್ತ

07:10 PM Dec 29, 2022 | Team Udayavani |

ಪಣಜಿ: ಉತ್ತರ ಗೋವಾ ಮತ್ತು ದಕ್ಷಿಣ ಗೋವಾ ಜಿಲ್ಲೆಗಳನ್ನು ಸಂಪರ್ಕಿಸುವ ಹೊಸ ಜುವಾರಿ ಸೇತುವೆಯನ್ನು (ಇಂದು) ಗುರುವಾರ ಸಂಜೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಉಧ್ಘಾಟನೆ ನೆರವೇರಿಸಿದರು. ಗುರುವಾರ ಮಧ್ಯಾಹ್ನ  ಈ ಸೇತುವೆ ಮೇಲೆ ಕಾಲ್ನಡಿಗೆಯ ಮೂಲಕ  ಕೇಂದ್ರ ಸಚಿನ ನಿತಿನ್ ಗಡ್ಕರಿ ಸೇತುವೆ ಪರಿಶೀಲನೆ ನಡೆಸಿದರು.

Advertisement

ಗಡ್ಕರಿ ಅವರು ಈ ಸೇತುವೆಯ ಪರಿಶೀಲನೆಯ ಫೋಟೋಗಳನ್ನು ಗಡ್ಕರಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೂಡ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಈ ಹೊಸ ಸೇತುವೆಯನ್ನು ಪೂರ್ಣಗೊಳಿಸಲು ಹೆಚ್ಚಿನ ಕೊಡುಗೆ ನೀಡಿದ್ದಾರೆ ಎಂದೇ ಹೇಳಲಾಗುತ್ತದೆ. ಮಾಜಿ ಮುಖ್ಯಮಂತ್ರಿ ದಿ. ಮನೋಹರ್  ಪರಿಕ್ಕರ್ ಅವರ ಮಾತಿನ ಪ್ರಕಾರ, ನಿತಿನ್ ಗಡ್ಕರಿ ಅವರು ಈ ಸಂಪೂರ್ಣ ಯೋಜನೆಗೆ ಎರಡು ಸಾವಿರ ಕೋಟಿ ನಿಧಿಯನ್ನು ಸುಲಭವಾಗಿ ಅನುಮೋದಿಸಿದ್ದಾರೆ ಎನ್ನಲಾಗಿದೆ.

ಅಟಲ್ ಸೇತು ನಂತರ, ಗೋವಾದಲ್ಲಿ ಜುವಾರಿ ಸೇತುವೆಯಂತಹ ದೊಡ್ಡ ಯೋಜನೆಯನ್ನು ನಿತಿನ್ ಗಡ್ಕರಿ ಪ್ರಾರಂಭಿಸಿದರು. ಈ ಸೇತುವೆಯು ಗೋವಾದ ಅಭಿವೃದ್ಧಿಗೆ ಪೂರಕವಾಗಲಿದೆ. ಈ ಸೇತುವೆಯು ಭಾರೀ ವಾಹನಗಳ ಸಂಚಾರಕ್ಕೆ ಹೆಚ್ಚು ಅನುಕೂಲ ಮಾಡಿಕೊಟ್ಟಿದೆ. ಕಳೆದ ಹಲವು ವರ್ಷಗಳಿಂದ ಇಲ್ಲಿ ಭಾರೀ ವಾಹನಗಳು ಕಂಡು ಬರುತ್ತಿದ್ದು, ಈ ಭಾಗದ ನಾಗರಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿತ್ತು. ಇದೀಗ ಜುವಾರಿ ಸೇತುವೆ ಉಧ್ಘಾಟನೆಯಿಂದಾಗಿ ಸಾರಾಗವಾಗಿ ವಾಹನ ಓಡಾಟಕ್ಕೆ ಹೆಚ್ಚಿನ ಅನುಕೂಲವಾದಂತಾಗಿದೆ.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಗೆ ಆಹ್ವಾನ :ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ಎಂದ ಅಖಿಲೇಶ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next