Advertisement

ಸದನಕ್ಕೆ ಬಂದ ಆನಂದ್‌ಸಿಂಗ್‌ಗೆ ಜಮೀರ್‌ ಸಾಥ್‌

09:08 AM Feb 07, 2019 | Team Udayavani |

ಬೆಂಗಳೂರು: ಈಗಲ್‌ಟನ್‌ ರೆಸಾರ್ಟ್‌ ನಲ್ಲಿ ನಡೆದ ಹಲ್ಲೆಯಿಂದ ಗಾಯಗೊಂಡಿದ್ದ ಕಾಂಗ್ರೆಸ್‌ ಶಾಸಕ ಆನಂದ್‌ಸಿಂಗ್‌ ಅಧಿವೇಶನಕ್ಕೆ ಹಾಜರಾಗಿ ದ್ದರು. ನಂತರ ಅಸ್ವಸ್ಥಗೊಂಡಿದ್ದ ರಿಂದ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ಬುಧವಾರ ಬೆಳಗ್ಗೆ ರಾಜ್ಯ ಪಾಲರ ಭಾಷಣ ಹಿನ್ನೆಲೆಯಲ್ಲಿ ಸಚಿವ ಜಮೀರ್‌ ಅಹಮದ್‌ ಅವರು ಆನಂದ್‌ಸಿಂಗ್‌ ಅವರನ್ನು ಸದನಕ್ಕೆ ಕರೆ ತಂದು ಜತೆಯಲ್ಲೇ ‘ಎಸ್ಕಾರ್ಟ್‌’ ನಂತಿದ್ದು ರಾಜ್ಯಪಾಲರ ಭಾಷಣದ ನಂತರ ಕರೆದೊಯ್ದರು. ಹಲ್ಲೆಯಲ್ಲಿ ಕಣ್ಣಿಗೆ ತೀವ್ರ ಗಾಯ ಆಗಿದ್ದರಿಂದ ಕಪ್ಪು ಕನ್ನಡಕ ಧರಿಸಿ ಬಂದ ಆನಂದ್‌ಸಿಂಗ್‌ ಅವರ ಆರೋಗ್ಯವನ್ನು ಮೂರೂ ಪಕ್ಷದ ಶಾಸಕರು ವಿಚಾರಿಸಿದರು. ತಮ್ಮ ಆರೋಗ್ಯ ವಿಚಾರಿಸಿದ ಶಾಸಕರು, ಪರಿಷತ್‌ ಸದಸ್ಯರಿಗೆ ಆನಂದ್‌ಸಿಂಗ್‌ ಕೃತಜ್ಞತೆ ಸಲ್ಲಿಸಿದರು. ಆನಂದ್‌ಸಿಂಗ್‌ ಅವರನ್ನು ತಮ್ಮ ಪಕ್ಕದಲ್ಲೇ ಕೂರಿಸಿಕೊಂ ಡಿದ್ದ ಜಮೀರ್‌ ಅಹಮದ್‌, ಬೇರೆಯವರ ಕೈಗೆ ಒಂಟಿಯಾಗಿ ಸಿಗದಂತೆ ನೋಡಿಕೊಂ ಡರು. ಸದನದಿಂದ ಕರೆದುಕೊಂಡು ಹೋಗುವಾಗ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆನಂದ್‌ಸಿಂಗ್‌ ಆರೋಗ್ಯ ವಿಚಾರಿಸಿದರು. ಸದನದಿಂದ ಹೋಗುತ್ತಿದ್ದಂತೆ ಮತ್ತೆ ಆರೋಗ್ಯದಲ್ಲಿ ಏರುಪೇರು ಉಂಟಾಗಿ ದ್ದರಿಂದ ಮತ್ತೆ ಆನಂದ್‌ಸಿಂಗ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಅತೃಪ್ತರತ್ತ ಚಿತ್ತ: ಅಧಿವೇಶನದಲ್ಲಿ ಕಾಂಗ್ರೆಸ್‌ ನಾಯಕರ ಚಿತ್ತ ಅತೃಪ್ತ ಶಾಸಕರತ್ತಲೇ ನೆಟ್ಟಿತ್ತು. ಭೀಮಾನಾಯಕ್‌, ಪ್ರತಾಪಗೌಡ ಪಾಟೀಲ್‌, ಬಸವರಾಜ ದದ್ದಲ್‌ ಅವರ ಮೇಲೆ ಕಣ್ಣಿಟ್ಟಿದ್ದರು. ಇತ್ತ ಮೊಗಸಾಲೆಯಲ್ಲೂ ಆಪರೇಷನ್‌ ಕಮಲ, ರಿವರ್ಸ್‌ ಆಪರೇಷನ್‌ನದ್ದೇ ಚರ್ಚೆ ನಡೆಯುತ್ತಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್‌ ಪ್ರತಿಪಕ್ಷ ಸದಸ್ಯರ ಮೊಗಸಾಲೆಯಲ್ಲಿ ಕುಳಿತು, ‘ಸರ್ಕಾರ ಎಷ್ಟು ದಿನ ಇರುತ್ತೋ ಬಾರಯ್ಯ’ ಎಂದು ತಮಾಷೆ ಮಾಡುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next