Advertisement

ಸಿದ್ದರಾಮಯ್ಯ ಭೇಟಿ ಮಾಡಿದ ಜಮೀರ್‌

07:08 AM Jun 03, 2019 | Lakshmi GovindaRaj |

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡುವ ದಿನಾಂಕದ ಕುರಿತು ಮೈತ್ರಿ ಪಕ್ಷಗಳ ನಾಯಕರ ನಡುವೆ ಸ್ಪಷ್ಟತೆ ಮೂಡಿದಂತಿಲ್ಲ. ಭಾನುವಾರ ಸಚಿವ ಜಮೀರ್‌ ಅಹಮದ್‌ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ರಮ್ಜಾನ್‌ ಹಬ್ಬದ ದಿನ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ.

Advertisement

ಬುಧವಾರ ಅಮಾವಾಸ್ಯೆ ಇರುವುದರಿಂದ ಗುರುವಾರ ರಮ್ಜಾನ್‌ ಹಬ್ಬ ಶುಭದಿನ ಇದ್ದು, ಅಂದು ಸಂಪುಟ ವಿಸ್ತರಣೆ ಮಾಡಬಹುದು ಎಂದು ಜಮೀರ್‌ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ರಮ್ಜಾನ್‌ ಹಬ್ಬವನ್ನು ಚಂದ್ರ ದರ್ಶನವಾದ ಮೇಲೆ ಆಚರಿಸುವುದರಿಂದ ಗುರುವಾರವೇ ಹಬ್ಬದ ಆಚರಣೆ ಆಗುತ್ತದೆ ಎನ್ನುವ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next