Advertisement

ನಾನೇ ಸಿಎಂ ಎಂದು ಮೊದಲು ಆರಂಭಿಸಿದ್ಯಾರು?: ಡಿಕೆಶಿಗೆ ಮತ್ತೆ ಸೆಡ್ಡು ಹೊಡೆದ ಜಮೀರ್

02:30 PM Jul 23, 2022 | Team Udayavani |

ಬೆಂಗಳೂರು: ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿದ್ದ ಎಚ್ಚರಿಕೆಗೆ ಶಾಸಕ‌‌ ಜಮೀರ್ ಅಹ್ಮದ್ ಸೆಡ್ಡು ಹೊಡೆಸಿದ್ದಾರೆ. ‘’ನನಗೆ ವ್ಯಕ್ತಿ ಪೂಜೆಯೂ ಮುಖ್ಯ, ಪಕ್ಷ ಪೂಜೆಯೂ ಮುಖ್ಯ’’ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷರ ನಿರ್ದೇಶನ ಉಲ್ಲಂಘಿಸಿದ್ದಾರೆ.

Advertisement

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಜಮೀರ್, “ನಾನೇ ಮುಂದಿನ ಮುಖ್ಯಮಂತ್ರಿ ಎಂಬ ಹೇಳಿಕೆಗೆ ಚಾಲನೆ ಕೊಟ್ಟಿದ್ದೇ ಡಿ.ಕೆ.ಶಿವಕುಮಾರ್. ಇದಾದ ಬಳಿಕ ನಾವು ನಮ್ಮ ಅಭಿಪ್ರಾಯ ಹೇಳಿದ್ದೇವೆ. ನಾನು ವ್ಯಕ್ತಿ ಪೂಜೆಯನ್ನೂ ಮಾಡುತ್ತೇನೆ, ಪಕ್ಷದ ಪೂಜೆಯನ್ನು ಮಾಡುತ್ತೇನೆ” ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ:ಕುಟುಂಬ ರಾಜಕಾರಣ ಮಾಡದವರು ಯಾರಿಲ್ಲ?; ಯಡಿಯೂರಪ್ಪ ಪರ ಈಶ್ವರಪ್ಪ ಬ್ಯಾಟಿಂಗ್

ಮುಖ್ಯಮಂತ್ರಿ ಆಗಬೇಕೆಂಬ ಆಕಾಂಕ್ಷೆ ಎಲ್ಲರಿಗೂ ಇರುತ್ತದೆ. ನಮ್ಮ ಸಮುದಾಯದ ಪರವಾಗಿ ನಾನು ಆಗಬೇಕು ಎಂದರೆ ತಪ್ಪಲ್ಲ. ಆದರೆ ಒಂದು ಸಮುದಾಯದ ಬೆಂಬಲದಿಂದ ಮಾತ್ರ ಸರಕಾರ ಅಧಿಕಾರಕ್ಕೆ ಬರುತ್ತದೆ ಎಂಬುದು ಸರಿಯಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next