Advertisement

Karnataka: ರಾಜ್ಯಪಾಲರಿಗೆ ಝುಡ್‌+ ಭದ್ರತೆ: ಕೇಂದ್ರ ಗೃಹ ಸಚಿವಾಲಯ ಕ್ರಮ

10:11 PM Oct 15, 2024 | Team Udayavani |

ಬೆಂಗಳೂರು: ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕೇಂದ್ರ ಗೃಹ ಸಚಿವಾಲಯವು ಝಡ್‌+ ಕೆಟಗರಿ ಭದ್ರತೆಯನ್ನು ನೀಡಿದೆ.

Advertisement

ಮುಡಾ ಪ್ರಕರಣದಲ್ಲಿ ಬೆದರಿಕೆ ಬಂದ ನಂತರ ಈ ಹಿಂದೆ ರಾಜ್ಯ ಪೊಲೀಸರು ನಿರ್ವಹಿಸುತ್ತಿದ್ದ ರಾಜ್ಯಪಾಲರ ಭದ್ರತೆಯನ್ನು ಈಗ ಸೆಂಟ್ರಲ್‌ ರಿಸರ್ವ್‌ ಪೊಲೀಸ್‌ ಫೋರ್ಸ್‌ (ಸಿಆರ್‌ಪಿಎಫ್) ನಿರ್ವಹಿಸುತ್ತದೆ.

ಶಸ್ತ್ರಸಜ್ಜಿತ ಸಿಆರ್‌ಪಿಎಫ್ ಸಿಬ್ಬಂದಿಯ ತಂಡವು ರಾಜ್ಯಪಾಲರೊಂದಿಗೆ ಪಾಳಿಯಲ್ಲಿ ಹೋಗುತ್ತದೆ. ಅವರು ರಾಜ್ಯಾದ್ಯಂತ ಪ್ರಯಾಣಿಸುವುದಿಲ್ಲ. ಈ ನಿರ್ಧಾರವು ಕೇಂದ್ರ ಗುಪ್ತಚರ ಸಂಸ್ಥೆಗಳ ಭದ್ರತಾ ಪರಿಶೀಲನೆಯನ್ನು ಅನುಸರಿಸುತ್ತದೆ.

ಮೊದಲು ರಾಜ್ಯಪಾಲರಿಗೆ ಕರ್ನಾಟಕ ಪೊಲೀಸರು ಭದ್ರತೆ ಒದಗಿಸುತ್ತಿದ್ದರು. 2021ರಲ್ಲಿ ಅಧಿಕಾರ ವಹಿಸಿಕೊಂಡ ಗೆಹಲೋತ್‌, ಈ ಮಟ್ಟದ ರಕ್ಷಣೆಯನ್ನು ಆರಿಸಿಕೊಂಡಿರಲಿಲ್ಲ. ಕರ್ನಾಟಕ ಸರ್ಕಾರವು ಈಗಾಗಲೇ ಗೆಹಲೋತ್‌ ಅವರಿಗೆ ಬುಲೆಟ್‌ ಪೂ›ಫ್ ಎಸ್‌ಯುವಿ ಒದಗಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next