Advertisement
ರವಿವಾರದ ಸೆಂಚುರಿಯನ್ ಪಂದ್ಯದಲ್ಲಿ ಜೀವನಶ್ರೇಷ್ಠ 5 ವಿಕೆಟ್ ಬೇಟೆಯಾಡಿ ಆತಿಥೇಯರನ್ನು ಅಲ್ಪ ಮೊತ್ತಕ್ಕೆ ಗಂಟುಮೂಟೆ ಕಟ್ಟುವಂತೆ ಮಾಡಿದ್ದು ಚಾಹಲ್ ಅವರ ಅಮೋಘ ಸಾಧನೆಯಾಗಿ ದಾಖಲಾಗಿದೆ.
Related Articles
“ಆರ್ಸಿಬಿ ಪರ ಇದಕ್ಕಿಂತ ಫ್ಲ್ಯಾಟ್ ಆದ ಬೆಂಗಳೂರು ಪಿಚ್ ಮೇಲೆ ನಾನು ಬೌಲಿಂಗ್ ನಡೆಸಿದ್ದೇನೆ. ಹೀಗಾಗಿ ದಕ್ಷಿಣ ಆಫ್ರಿಕಾದಲ್ಲಿ ಪೂರ್ಣ ಸಾಮರ್ಥ್ಯದೊಂದಿಗೆ ಬೌಲಿಂಗ್ ನಡೆಸಿ ಹೆಚ್ಚಿನ ಯಶಸ್ಸು ಸಂಪಾದಿಸಬಹುದು ಎಂಬುದು ನನ್ನ ಲೆಕ್ಕಾಚಾರವಾಗಿತ್ತು. ಎದುರಾಳಿ ಬ್ಯಾಟ್ಸ್ಮನ್ಗಳ ದಾಖಲೆ ಅಥವಾ ಅವರ ತಾಕತ್ತಿನ ಬಗ್ಗೆ ಚಿಂತಿಸುತ್ತ ಉಳಿದರೆ ನಿಮಗೆ ಖಂಡಿತ ಪೂರ್ಣ ಪ್ರಮಾಣದ ಸಾಮರ್ಥ್ಯವನ್ನು ಹೊರಗೆಡಹಲು ಸಾಧ್ಯವಾಗದು. ಇದು ನನ್ನ ಸ್ವಂತ ಅನುಭವ. ಐಪಿಎಲ್ನಲ್ಲಿ 4 ಓವರ್ಗಳಲ್ಲಿ ನಾನು 40 ರನ್ ಕೊಟ್ಟದ್ದೂ ಇದೆ. ರನ್ ಉಳಿಸುವ ಉದ್ದೇಶದಿಂದಷ್ಟೇ ನಾನು ಬೌಲಿಂಗ್ ಮಾಡುವುದಿಲ್ಲ. ವಿಕೆಟ್ ಉರುಳಿಸುವುದೇ ನನ್ನ ಮುಖ್ಯ ಗುರಿ, ಆದ್ದರಿಂದಲೇ ನಾನು ತಂಡದಲ್ಲಿ ಉಳಿದಿದ್ದೇನೆ’ ಎಂದರು ಚಾಹಲ್.
Advertisement
“ಕಳೆದ ವರ್ಷ ನಾನು ಎ ತಂಡದ ಜತೆ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿದ್ದೆ. ಹೀಗಾಗಿ ಇಲ್ಲಿನ ಅಂಗಳ, ಪಿಚ್ ಬಗ್ಗೆ ಸ್ವಲ್ಪ ಮಟ್ಟಿಗೆ ಅರಿವಿತ್ತು. ಇಂಥ ಕಠಿನ ಪ್ರವಾಸದ ವೇಳೆ ವೀಡಿಯೋ ದೃಶ್ಯಾವಳಿಗಳನ್ನು ವೀಕ್ಷಿಸುವುದೂ ಮುಖ್ಯ’ ಎಂದು ಚಾಹಲ್ ಅಭಿಪ್ರಾಯಪಟ್ಟರು.