Advertisement

“ಪುಸ್ತಕ ಓದುವ ಶಾಸಕ ಯಾರಿಗೂ ಬೇಡ’

12:10 PM Oct 03, 2018 | |

ಶಿವಮೊಗ್ಗ: “ರಾಜಕಾರಣದಲ್ಲಿ ಇಂದು ಪುಸ್ತಕ ಓದುವ, ತಣ್ತೀ-ಆದರ್ಶ ಹೇಳುವವರು ಯಾರಿಗೂ ಬೇಡವಾಗಿದ್ದಾರೆ. ಹೀಗಾಗಿ ನಾನು ಮತ್ತು ಕಿಮ್ಮನೆ ರತ್ನಾಕರ್‌ ಅಂಥವರೆಲ್ಲ ನಾಲಾಯಕ್‌, ಅಪ್ರಸ್ತುತರಾಗಿದ್ದೇವೆ. ಪುಸ್ತಕ ಓದುವ ಎಂಎಲ್‌ಎ ಯಾರಿಗೂ ಬೇಡವಾಗಿದ್ದಾನೆ’ ಎಂದು ಮಾಜಿ ಶಾಸಕ, ಜೆಡಿಎಸ್‌ ಮುಖಂಡ ವೈ.ಎಸ್‌.ವಿ.ದತ್ತ ಹೇಳಿದರು.

Advertisement

ಮಂಗಳವಾರ ತೀರ್ಥಹಳ್ಳಿಯಲ್ಲಿ ಗಾಂಧಿ  ಜಯಂತಿ ಅಂಗವಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಹಮ್ಮಿಕೊಂಡಿದ್ದ ಒಂದು ದಿನದ ನಿರಶನದಲ್ಲಿ ಪಾಲ್ಗೊಂಡ ಅವರು ಪ್ರಸ್ತುತ ರಾಜಕಾರಣವನ್ನು  ವಿಶ್ಲೇಷಿಸಿದ ಪರಿ ಇದು. ವಿಧಾನಸೌಧದ ಗ್ರಂಥಾಲಯದಲ್ಲಿ ನನಗೆ ಸಿಗುತ್ತಿದ್ದ ಏಕೈಕ ಸ್ನೇಹಿತ ಕಿಮ್ಮನೆ ರತ್ನಾಕರ್‌. ಆದರೆ ನಾನು ಮತ್ತು ಕಿಮ್ಮನೆ ರತ್ನಾಕರ್‌ ಇಬ್ಬರೂ ಈ ಬಾರಿಯ ಚುನಾವಣೆಯಲ್ಲಿ ಸೋಲು ಕಂಡಿದ್ದೇವೆ. ಚುನಾವಣೆಯಲ್ಲಿ ಸೋಲಲು ಹಣ ಮತ್ತು ಆಣೆ ಪ್ರಮಾಣ ಕಾರಣ. ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವರ ಆಣೆ ಪ್ರಮಾಣ ಮತದಾರರ ಮೇಲೆ ಪ್ರಭಾವ ಬೀರಿದ್ದರಿಂದ ಸೋಲು ಕಾಣಬೇಕಾಯಿತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next