Advertisement

ಕಾಂಗ್ರೆಸ್ ನತ್ತ ವೈ.ಎಸ್.ವಿ ದತ್ತಾ; ಪಕ್ಷ ಸೇರ್ಪಡೆಗೆ ದಿನಾಂಕ ಫಿಕ್ಸ್

12:26 PM Jan 06, 2023 | Team Udayavani |

ಚಿಕ್ಕಮಗಳೂರು: ಜೆಡಿಎಸ್ ಜೊತೆಗಿನ ಬಹುಕಾಲದ ನಂಟನ್ನು ತೊರೆಯಲು ನಿರ್ಧರಿಸಿರುವ ವೈ.ಎಸ್.ವಿ ದತ್ತ ಅವರು ಕಾಂಗ್ರೆಸ್ ಸೇರ್ಪಡೆಗುತ್ತಿದ್ದು, ಇಂದು ಅಧಿಕೃತ ಘೋಷಣೆ ಮಾಡಿದರು.

Advertisement

ಜನವರಿ 15ರ ಬಳಿಕ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವ ಬಗ್ಗೆ ಕಡೂರು ತಾಲೂಕಿನ ಸ್ವಗ್ರಾಮದಲ್ಲಿ ಅಧಿಕೃತ ಘೋಷಣೆ ಮಾಡಿದರು.

ಮಾಜಿ ಪ್ರಧಾನಿ ದೇವೇಗೌಡರು ಮತ್ತು ನನ್ನದು ತಂದೆ ಮಕ್ಕಳ ಸಂಬಂಧ. ಕಳೆದ 50 ವರ್ಷಗಳಿಂದ ಭಾವನಾತ್ಮಕ ಸಂಬಂಧವಿದೆ. ನಾನೆಲ್ಲೇ ಇದ್ದರೂ ಅವರ ಹಾರೈಕೆ ನನ್ನ ಮೇಲೆ ಇದ್ದೇ ಇರುತ್ತದೆ. ನನ್ನನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದೆ ದೇವೇಗೌಡರು. ಅದು ನನ್ನ ರಾಜಕೀಯ ಜೀವನಕ್ಕೆ ಸಿಕ್ಕ ತಿರುವು. ಇದೀಗ ಅನಿವಾರ್ಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ. ಇದನ್ನು ದೇವೇಗೌಡರಿಗೆ ಹೇಳಲು ಮುಜುಗರ, ಅವರು ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದರು.

ಇದನ್ನೂ ಓದಿ:ಐಸಿಸ್ ನಿಂದ ಕ್ರಿಪ್ಟೋ ವಾಲೆಟ್ಸ್ ಮೂಲಕ ಹಣ ಪಡೆಯುತ್ತಿದ್ದ ಉಡುಪಿಯ ರೇಶಾನ್, ಶಿವಮೊಗ್ಗದ ಹುಜೈರ್

ಮಾಜಿ ಸಿಎಂ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರುತ್ತೇನೆ ಎಂದು ವೈ.ಎಸ್.ವಿ ದತ್ತಾ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next