Advertisement

Mann Ki Baat: ತೆಲುಗಿನ ಜನರ ಮನ್‌ ಕಿ ಬಾತ್‌ ಆಲಿಸಿ… ಮೋದಿಗೆ ಶರ್ಮಿಳಾ

10:53 PM May 08, 2024 | Team Udayavani |

ಕಡಪ: ಆಂಧ್ರಪ್ರದೇಶಕ್ಕೆ 10 ವರ್ಷಗಳಿಂದ ಮೋಸ ಮಾಡಿರುವ ಮೋದಿಗೆ ಇಲ್ಲಿಗೆ ಕಾಲಿಡುವ ಅರ್ಹತೆ ಇಲ್ಲ ಎಂದು ಆಂಧ್ರಪ್ರದೇಶ ಕಾಂಗ್ರೆಸ್‌ ಅಧ್ಯಕ್ಷೆ ವೈ.ಎಸ್‌.ಶರ್ಮಿಳಾ ಹೇಳಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ರೇಡಿಯೋವೊಂದನ್ನು ಹಿಡಿದು “ಮೋದಿಯವರಿಗೆ ಇದು ನಾನು ನೀಡುತ್ತಿರುವ ಉಡುಗೊರೆ. ಇದರಿಂದ ತೆಲುಗು ಜನರ “ಮನ್‌ ಕೀ ಬಾತ್‌’ ಅನ್ನು ಮೋದಿ ಕೇಳಲಿ’ ಎಂದು ಹೇಳಿದ್ದಾರೆ.

ನೀವು ಆಂಧ್ರಕ್ಕೆ ಪ್ರವೇಶಿಸಲು ಅರ್ಹರಲ್ಲ, ಮೊದಲು ಆಂಧ್ರದ ಜನತೆಯೊಂದಿಗೆ ಕ್ಷಮೆಯಾಚಿಸಿ. 10 ವರ್ಷಗಳ ಕಾಲ ಇಲ್ಲಿನ ಜನರಿಗೆ ಮೋಸ ಮಾಡಿ ಈಗ ಬಂದು ಮೊಸಳೆ ಕಣ್ಣೀರು ಸುರಿಸುತ್ತಿದ್ದೀರಿ ಎಂದು ಹರಿಹಾಯ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next