Advertisement

Kota ಅಪಘಾತದ ಗಾಯಾಳು ಯುವಕ ಸಾವು

10:51 PM Nov 11, 2023 | Team Udayavani |

ಕೋಟ: ಸಾಲಿಗ್ರಾಮ ಸಮೀಪ ಕೋಡಿಕನ್ಯಾಣದಲ್ಲಿ ಕಳೆದ ತಿಂಗಳು ಸಂಭವಿಸಿದ ಬೈಕ್‌ ಹಾಗೂ ಕಾರುಗಳ ನಡುವಣ ಸರಣಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಶನಿವಾರ ಸಂಭವಿಸಿದೆ. ಇಲ್ಲಿನ ನಿವಾಸಿ ಚರಣ್‌ ಕಾಂಚನ್‌ (22) ಮೃತ ಯುವಕ.

Advertisement

ಅ.15ರಂದು ರಾತ್ರಿ ಕೋಡಿ ಕನ್ಯಾಣದಿಂದ ಪಡುಕರೆ ಕಡೆಗೆ ಸಂಚರಿಸುತ್ತಿದ್ದ ಬೈಕ್‌ವೊಂದು ಕಾರು ಹಾಗೂ ಎದುರಿಗೆ ಬರುತ್ತಿದ್ದ ಮತ್ತೂಂದು ಬೈಕ್‌ಗೆ ಢಿಕ್ಕಿಯಾಗಿತ್ತು. ಇದರಿಂದಾಗಿ ಬೈಕ್‌ ಸವಾರ ರವಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಇನ್ನೊಂದು ಬೈಕ್‌ನಲ್ಲಿದ್ದ ಬೆಂಗಳೂರಿನ ಖಾಸಗಿ ಕಂಪೆನಿ ಉದ್ಯೋಗಿ, ಚರಣ್‌ ಕಾಂಚನ್‌ ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟರು. ಮೃತರು ತಂದೆ, ತಾಯಿಯನ್ನು ಅಗಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next