Advertisement

ಪ್ರತಾಪ್‌ ಸಿಂಹ ವಿರುದ್ಧ ಯುವ ಕಾಂಗ್ರೆಸ್‌ ಪ್ರತಿಭಟನೆ

04:34 PM Dec 05, 2017 | Team Udayavani |

ಬೆಂಗಳೂರು: ಹುಣಸೂರಿನಲ್ಲಿ ಹನುಮ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಬ್ಯಾರಿಕೇಡ್‌ ಮುರಿದು ಪೊಲಿಸರ ಮೇಲೆ ದರ್ಪ ತೋರಿದ್ದ ಸಂಸದ ಪ್ರತಾಪ್‌  ಸಿಂಹ ವಿರುದ್ಧ ಯುವ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ಕವಿಕ ಅಧ್ಯಕ್ಷ ಮನೋಹರ್‌ ನೇತೃತ್ವದಲ್ಲಿ ಮೌರ್ಯ ಸರ್ಕಲ್‌ನಲ್ಲಿ ಪ್ರತಾಪ್‌ ಸಿಂಹ ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ ಮುರಿಯುವ ರೀತಿ ಅಣಕು ಪ್ರದರ್ಶನ ಮಾಡಿದ ಕಾಂಗ್ರೆಸ್‌ ಕಾರ್ಯಕರ್ತರು. ರೌಡಿ ಸಂಸದ ಪ್ರತಾಪ್‌ ಸಿಂಹ  ಹಾಗೂ ಅವಿವೇಕಿ ರಾಜಕಾರಣಿ ಸಿ.ಟಿ. ರವಿ ಎಂದು ಘೋಷಣೆ ಕೂಗಿದರು. ಸಂಸದ ಪ್ರತಾಪ್‌ ಸಿಂಹನ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಇದೇ ವೇಳೆ ಪ್ರತಾಪ್‌ ಸಿಂಹ ಪ್ರತಿಕೃತಿ ದಹಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next