Advertisement

ಗಾಂಧಿ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ‘ವೋಟಿ ರವಿ’ಗಿಲ್ಲ: ಬಿ.ವಿ.ಶ್ರೀನಿವಾಸ

01:03 PM Jun 24, 2022 | Team Udayavani |

ಬೆಂಗಳೂರು: ಗಾಂಧಿ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ವೋಟಿ ರವಿಗೆ (ಸಿ.ಟಿ.ರವಿ) ಇಲ್ಲ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ ಹೇಳಿದರು.

Advertisement

ಅಗ್ನಿಪಥ್ ಯೋಜನೆ ವಿರೋಧಿಸಿ ಯುವ ಕಾಂಗ್ರೆಸ್ ಹಮ್ಮಿಕೊಂಡಿದ್ದ ಆಕ್ರೋಶ್ ರಾಲಿಯಲ್ಲಿ ಮಾತನಾಡಿದರು. ಸಿ.ಟಿ ರವಿ ಆ್ಯಕ್ಸಿಡೆಂಟ್ ಗಿರಾಕಿ. ಈಗಾಗಲೇ ಎರಡ್ಮೂರು ಆ್ಯಕಿಡೆಂಟ್ ಮಾಡಿ ಜನರ ಜೀವ ತೆಗೆದಿದ್ದಾರೆ. ಅಂತಹವರಿಂದ ನಮಗೆ ನೀತಿಪಾಠ ಬೇಡ ಎಂದರು.

ಅಗ್ನಿಪಥ್ ಹೆಸರಿಗೆ ಮಸಿಬಳಿಯುವ ಕೆಲಸ ಬಿಜೆಪಿ ಮಾಡಿದೆ. ಭಾರತೀಯ ಸೇನೆಯನ್ನು ಖಾಸಗಿ ಪಾಲು ಮಾಡುವ ಹುನ್ನಾರ ನಡೆಸಿದ್ದಾರೆ. ದೇಶದ ಆಸ್ತಿಗಳನ್ನೇ ಮೋದಿ, ಅಮಿತ್ ಷಾ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ:ರಾಷ್ಟ್ರಪತಿ ಹುದ್ದೆಯಲ್ಲಿ ಜಾತಿ ನೋಡಿ ಬಿಜೆಪಿ ಸಂವಿಧಾನಕ್ಕೆ ಅಗೌರವ ತೋರಿದೆ: ಮಹಾದೇವಪ್ಪ

ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಲಪಾಡ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಅವರು ರಾಮ ರಾಜ್ಯ ಮಾಡುವ ಭರವಸೆ ನೀಡಿದ್ದರು. ಆದರೆ ಈಗ ರಾವಣ ರಾಜ್ಯ ನಿರ್ಮಾಣ ಮಾಡಿದ್ದಾರೆ ಎಂದು ದೂರಿದರು.

Advertisement

ಅಗ್ನಿಪಥ್ ಯೋಜನೆ ಯಾವುದೆ ಕಾರಣಕ್ಕೂ ಜಾರಿಗೆ ಅವಕಾಶ ನೋಡುವುದಿಲ್ಲ. ಯುವ ಕಾಂಗ್ರೆಸ್ ಇದರ ವಿರುದ್ದ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು

Advertisement

Udayavani is now on Telegram. Click here to join our channel and stay updated with the latest news.

Next