Advertisement

ಇಂದಿನ ಗ್ರಹಬಲ: ಈ ರಾಶಿಯವರ ಮಕ್ಕಳ ಮೋಜು ಮಾನಹಾನಿಗೆ ಕಾರಣವಾದೀತು, ಎಚ್ಚರ!

08:06 AM Apr 19, 2021 | Team Udayavani |

19-04-2021

Advertisement

ಮೇಷ: ವ್ಯವಹಾರದಲ್ಲಿ ಧಾರಾಳ ಸಂಪಾದನೆ ಕಂಡು ಬಂದರೂ ಖರ್ಚು ಅಷ್ಟೇ ಇದ್ದೀತು. ನೆರೆಹೊರೆಯ ವರ ಬಗ್ಗೆ ಜಾಗ್ರತೆ ಮಾಡಿರಿ. ಸಾಂಸಾರಿಕವಾಗಿ ಕೂಡ ಅಸಮಾಧಾನದ ವಾತಾವರಣವು ಕಿರಿಕಿರಿಯೆನಿಸಲಿದೆ. ಮುನ್ನಡೆಯಿರಿ.

ವೃಷಭ: ಶಾಂತ ಚಿತ್ತರು ಹಾಗೂ ಸಮಾಧಾನ ಪ್ರಿಯರಾದ ನಿಮಗೆ ಯಾರು ಏನೆಂದರೂ ಬೇಸರವಾದರೂ ತೋರ್ಪಡಿಸುವುದಿಲ್ಲ. ನಿಮ್ಮ ಸ್ವಭಾವವು ಅತೀ ಮೃದು ನಿಮಗೆ ಕಷ್ಟಕ್ಕೆ ಗುರಿಮಾಡಲಿದೆ. ಜಾಗ್ರತೆಯಿಂದ ಮುನ್ನಡೆಯಿರಿ.

ಮಿಥುನ: ಸಾಂಸಾರಿಕವಾಗಿ ಕೂಡ ಅಸಮಾಧಾನದ ವಾತಾವರಣ ಕಂಡು ಬರಲಿದೆ. ಸ್ಥಳ ಯಾ ನಿವೇಶನ ಸಂಬಂಧಿತ ವಿಷಯದಲ್ಲಿ ಮುನ್ನಡೆ ಕಂಡು ಬಂದೀತು. ಆರ್ಥಿಕವಾಗಿ ಋಣಭಾರವಿದ್ದರೂ ಬೇರೆಲ್ಲಾ ರೀತಿಯಲ್ಲಿ ಯಶಸ್ಸು ಇದೆ.

ಕರ್ಕ:ಉದ್ಯೋಗ ಸ್ಥಿತಿಯಲ್ಲಿ ಆರ್ಥಿಕವಾಗಿ, ದೈಹಿಕವಾಗಿ ಹಾಗೂ ಮಾನಸಿಕವಾಗಿ ನಾನಾ ರೀತಿಯಲ್ಲಿ ಅಡಚಣೆ ಯನ್ನು ಅನುಭವಿಸುವಂತಾದೀತು. ಬಂಡವಾಳ ವ್ಯವಹಾರದಲ್ಲಿ ಕಷ್ಟನಷ್ಟಗಳ ಸಂಭವವಿದೆ. ಮಹತ್ಕಾರ್ಯದಲ್ಲಿ ಸಾಧನೆಯಾಗಲಿದೆ.

Advertisement

ಸಿಂಹ: ಶೇರು ಮಾರ್ಕೆಟ್‌, ಕಮಿಶನ್‌ ವ್ಯವಹಾರದಲ್ಲಿ, ಬಂಡವಾಳದಲ್ಲಿ ಲಾಭ ಕಡಿಮೆಯಾದೀತು. ಅಲ್ಲದೆ ಭಡ್ತಿಯಲ್ಲೂ ಹಿನ್ನಡೆ ಕಂಡು ಬಂದೀತು. ಹೊಸ ಚಿಂತನೆಗೆ ಇದು ಸಕಾಲವಲ್ಲ. ಆರೋಗ್ಯದಲ್ಲಿ ಸುಧಾರಣೆ ಇರುತ್ತದೆ.

ಕನ್ಯಾ: ತಾಳ್ಮೆ, ಸಮಾಧಾನ ಚಿತ್ತರಾಗಿ ಮುಂದುವರಿದಲ್ಲಿ ನಿರೀಕ್ಷಿಸದ ಅಚ್ಚರಿಯು ನಿಮಗೆ ಕಾದಿರುತ್ತದೆ. ಸಂತೋಷ ದಿಂದ ಅನುಭವಿಸಿರಿ. ಕಠಿಣ ಪರಿಶ್ರಮವು ನಿಮ್ಮ ಮುನ್ನಡೆಗೆ ಕಾರಣವಾಗಲಿದೆ . ಹಿರಿಯರಿಂದ ಸೂಕ್ತ ಸಲಹೆಗಳು ಬಂದಾವು.

ತುಲಾ: ನಿರೀಕ್ಷಿತ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಕಂಡು ಬಂದಾವು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಖರ್ಚು ಸ್ವಲ್ಪ ಹೆಚ್ಚು ಕಂಡು ಬರುವುದು. ಉದ್ಯೋಗಿಗಳಿಗೆ ಕೈತುಂಬಾ ಕೆಲಸಗಳಿದ್ದು ವಿಶ್ರಾಂತಿಯೇ ಇಲ್ಲವಾಗಲಿದೆ.

ವೃಶ್ಚಿಕ: ಈ ಸಮಯದಲ್ಲಿ ಬಂದ ಅವಕಾಶವನ್ನು ಸದುಪಯೋಗಿಸಿಕೊಂಡಲ್ಲಿ ಎಲ್ಲಾ ರೀತಿಯ ಸೌಭಾಗ್ಯವು ಕಂಡು ಬರುವುದು. ದಾಯಾದಿಗಳ ಕಿರಿಕಿರಿಯು ಹೆಚ್ಚಾಗಿ ಮನಸ್ಸಿನ ನೆಮ್ಮದಿ ಕೆಡಿಸಲಿದೆ. ಖರ್ಚುಗಳ ಮೇಲೆ ನಿಗಾ ಇಡಿರಿ.

ಧನು: ಮನೆಯಲ್ಲಿ ಶುಭಮಂಗಲ ಕಾರ್ಯಕ್ಕಾಗಿ ಓಡಾಟ ಒದಗಿ ಬರಲಿದೆ. ಎಲ್ಲಾ ವಿಚಾರದಲ್ಲಿ ಚಿಂತಿಸಿ, ಮುನ್ನಡೆಯುವ ಅಗತ್ಯವಿದೆ. ಶನಿಯ ಪ್ರತಿಕೂಲತೆಯೂ ಸೇರಿರುವುದರಿಂದ ಜಾಗ್ರತೆಯಿಂದ ಮುನ್ನಡೆಯುವುದು.

ಮಕರ: ಆಕರ್ಷಕವಾದ ದುಡಿಮೆಗೆ ನಿಮ್ಮ ಪ್ರಯತ್ನಬಲ ಕ್ರಿಯಾಶೀಲತೆ ಕೂಡ ಪೂರಕವಾಗಲಿದೆ. ಉದ್ಯೋಗಿಗಳಿಗೆ ಅನಿರೀಕ್ಷಿತ ವರ್ಗಾವಣೆಯು ಕಂಡು ಬರುವುದು. ಸಂಸಾರದ ಖರ್ಚಿನ ನಿಭಾವಣೆಗಾಗಿ ಹೆಣಗಾಡಬೇಕಾದೀತು.

ಕುಂಭ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗಾಗಿ ದೂರ ಪ್ರಯಾಣ ತೋರಿಬರುವುದು. ಅಜೀರ್ಣ ಉಪದ್ರವ, ಬೆನ್ನು ನೋವಿನ ಉಪದ್ರವವು ಕಂಡು ಬಂದೀತು. ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ ಇದ್ದರೂ ಆತಂಕಕ್ಕೆ ಕಾರಣವಾದೀತು.

ಮೀನ: ಮಕ್ಕಳ ಮೋಜು ಮಾನಹಾನಿಗೆ ಕಾರಣವಾದೀತು. ಪ್ರೀತಿಯ ಮಡದಿಯ ಸೂಕ್ತ ಸಲಹೆಗಳಿಗೆ ಸ್ಪಂದಿ ಸಿದಲ್ಲಿ ಮುನ್ನಡೆ ತೋರಿ ಬರುವುದು. ವೃತ್ತಿರಂಗದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ ದೊರಕಲಿದೆ. ಜವಾಬ್ದಾರಿ ಹೆಚ್ಚಲಿದೆ.

 

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next