Advertisement

ಇಂದಿನ ಗ್ರಹಬಲ: ಈ ರಾಶಿಯವರಿಗೆ ಗೃಹ ನಿರ್ಮಾಣದ ಕನಸು ಸಾಕಾರಗೊಳ್ಳಲಿದೆ.

07:52 AM Apr 11, 2021 | Team Udayavani |

11-04-2021

Advertisement

ಮೇಷ: ತುಂಬಾ ಚಟುವಟಿಕೆ ಹಾಗೂ ಹರುಷದಿಂದ ಇರುವ ಕಾಲವಿದು. ನಿಮಗೆ ಇದು ಅತೀ ಮಹತ್ವದ ದಿನವಾದೀತು. ವ್ಯವಹಾರಿಕವಾಗಿ ನಿಮ್ಮ ಪ್ರಯತ್ನಬಲಕ್ಕೆ ಹೆಚ್ಚಿನ ಲಾಭ ಕಂಡುಬರುವುದು. ಆದರೂ ಮನಃಶಾಂತಿ ಇಲ್ಲ.

ವೃಷಭ: ಮನೆಯಲ್ಲಿ ಅವಿವಾಹಿತರಿಗೆ ನೆಂಟಸ್ತಿಕೆಯ ಮಾತುಕತೆಗಳು ಫ‌ಲ ನೀಡಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಲಭಿಸಲಿದೆ. ಮಕ್ಕಳ ಜವಾಬ್ದಾರಿಯು ನಿಮ್ಮ ತಲೆಮೇಲಿದೆ. ಕರ್ತವ್ಯದಿಂದ ಭಾರ ಕಂಡುಬಂದೀತು.

ಮಿಥುನ: ನಿಮ್ಮ ಹೆಚ್ಚಿನ ಕೆಲಸಕಾರ್ಯಗಳು ಚಾಲನೆಗೆ ಬರುವುದು. ಇದರಲ್ಲಿ ನೀವು ಮುಂದುವರಿಯುವ ಅವಕಾಶವಿದೆ. ಗೃಹ ನಿರ್ಮಾಣದ ಕನಸು ಸಾಕಾರಗೊಳ್ಳಲಿದೆ. ಮನೆಯಲ್ಲಿ ಕೆಲಸದ ತಲೆಬಿಸಿಯು ಕಂಡುಬರುವುದು.

ಕರ್ಕ: ನಿಮ್ಮ ವೈಯಕ್ತಿಕ ಹಾಗೂ ಔದ್ಯೋಗಿಕ ಜೀವನಗಳೆರಡರಲ್ಲೂ, ಹಠಾತ್‌ ಪ್ರಗತಿ ಯಾ ಸೋಲು ಕಂಡುಬರಬಹುದು. ಸಿಹಿ ಯಾ ಕಹಿಯನ್ನು ಯಾವಾಗಲೂ ಸಮಾನವಾಗಿ ಸ್ವೀಕರಿಸಲು ಸಿದ್ಧರಾಗಿರಿ. ಧೈರ್ಯದಿಂದ ಮುನ್ನಡೆಯಿರಿ.

Advertisement

ಸಿಂಹ: ಒಟ್ಟಿನಲ್ಲಿ ಹೇಳುವುದಾದರೆ ನೀವು ಅದೃಷ್ಟದ ಕೈಗೊಂಬೆಯಾಗುವಿರಿ. ವ್ಯಾಪಾರಿಗಳ ದೈನಂದಿನ ಜೀವನದಲ್ಲಿ ಗೊಂದಲ, ಸಮಸ್ಯೆಗಳು ತೋರಿಬಂದಾವು. ಕೌಟುಂಬಿಕ ವ್ಯವಹಾರದಲ್ಲಿ ಅನಿರೀಕ್ಷಿತ ಖರ್ಚುವೆಚ್ಚ ಕಂಡುಬಂದೀತು.

ಕನ್ಯಾ: ಸಂಬಂಧಿಕರಿಂದ ನಿಮಗೆ ಸಹಾಯಹಸ್ತ ಒದಗಿಬಂದೀತು. ನಿಮ್ಮ ಕಾರ್ಯಕ್ಷೇತ್ರದ ವ್ಯವಹಾರಗಳನ್ನು ಮುಗಿಸಲು ತುರಾತುರಿಯಿಂದ ಮುಂದುವರಿಯಬೇಕಾದೀತು. ಇಲ್ಲವಾದಲ್ಲಿ ನಿಮ್ಮ ಕೆಲಸ ವಿಳಂಬಗತಿ ಕಾಣಲಿದೆ.

ತುಲಾ: ಸಾಮಾಜಿಕವಾಗಿ ಜನಪ್ರಿಯತೆ, ಗೌರವ, ಸ್ಥಾನಮಾನ ಸಿಗಲಿದೆ. ಕೌಟುಂಬಿಕ ವಾತಾವರಣ ಜಟಿಲವಾಗಲಿದೆ. ದೂರದಲ್ಲಿದ್ದವರೊಬ್ಬರು ನಿಮ್ಮ ವ್ಯವಹಾರದಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ. ಅತೀ ವಿಶ್ವಾಸ ಮಾಡದಿರಿ.

ವೃಶ್ಚಿಕ: ಅದೃಷ್ಟವು ತೂಗುಯ್ನಾಲೆ ಆಡಿಸುತ್ತದೆ. ಆರೋಗ್ಯದ ಬಗ್ಗೆ ಮೊದಲೇ ಜಾಗೃತರಾಗಿರುವುದು ಲೇಸು. ಆರ್ಥಿಕ ಅಡಚಣೆಗಳು ದೂರವಾಗಿ ಯೋಜನೆಗಳು ಕಾರ್ಯರೂಪಕ್ಕೆ ಬರಲಿದೆ. ಸಾಮಾಜಿಕವಾಗಿ ಸ್ಥಾನಮಾನ, ಗೌರವ ಹೆಚ್ಚಲಿದೆ.

ಧನು: ದೂರಸಂಚಾರದಲ್ಲಿ ಯಶಸ್ಸು ತೋರಿಬರುವುದು. ಕೌಟುಂಬಿಕ ವ್ಯವಹಾರಗಳು ಸುಗಮವಾಗಿ ನಡೆಯಲಿವೆ. ನಿರುದ್ಯೋಗಿಗಳಿಗೆ ಮುಂದಿನ ಯೋಜನೆಗಳ ಬಗ್ಗೆ ಸ್ಪಷ್ಟ ಚಿತ್ರಣ ಹೊಳೆಯಲಿದೆ. ಆರೋಗ್ಯಭಾಗ್ಯವು ವರ್ದಿಸಲಿದೆ.

ಮಕರ: ವ್ಯಾಪಾರಿಗಳ ಜೀವನದಲ್ಲಿ ಭಾರೀ ಚಟುವಟಿಕೆಯ ಕಾಲವಿದು. ಲಾಭದಾಯಕ ಆದಾಯವು ವ್ಯವಹಾರದಲ್ಲಿ ತೋರಿ ಬರುವುದು. ಇದರಿಂದ ಸಂತಸವಾದೀತು. ನೂತನ ವ್ಯಾಪಾರ, ವ್ಯವಹಾರ ಯಾ ಚಟುವಟಿಕೆಗಳಲ್ಲಿ ತೊಡಗಿಸುವಿರಿ.

ಕುಂಭ: ನಿಮ್ಮ ಜೀವನವು ಹೊಸ ವಾತಾವರಣದಿಂದ ಸಂತಸ ಹಾಗೂ ಭಾಂದವ್ಯ ಗಟ್ಟಿಯಾಗಿ ಸಮಾಧಾನವಾದೀತು. ಸ್ವಲ್ಪ ಅದೃಷ್ಟದ ಸೆಲೆಯು ಕಂಡುಬಂದೀತು. ಮನೆಯಲ್ಲಿ ನಿಮ್ಮ ಚಿಂತನೆಗೆ ಸಮರ್ಥನೆ ಇಲ್ಲವೆಂದು ಚಿಂತಿಸದಿರಿ.

ಮೀನ: ಈ ಮಧ್ಯೆ ಉತ್ತಮ ಮಹತ್ವದ ಘಟನೆಗಳು ಕಂಡುಬಂದಾವು. ಹಣದ ಮುಗ್ಗಟ್ಟು ಕಂಡು ಬರಲಿದೆ. ಎಷ್ಟು ಬಂದರೂ ಸಾಲದೆಂಬಂತೆ ಇದೆ. ಪ್ರಣಯ ಪ್ರಸಂಗದಿಂದ ಜಾರಿಕೊಳ್ಳುವುದೇ ಲೇಸು. ಮುನ್ನಡೆಯಿರಿ.

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next