Advertisement

ಪ್ರೇಮ ವಿವಾಹವಾದ 20ರ ಯುವತಿ ಹೆದ್ದಾರಿಯಲ್ಲೇ ಬೆಂಕಿ ಹಚ್ಚಿಕೊಂಡಳು!

12:00 PM May 18, 2017 | |

ಚಾಮರಾಜನಗರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 209 ರ ಕುವೆಂಪು ಬಡಾವಣೆಯಲ್ಲಿ ಯುವತಿಯೊಬ್ಬಳು ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. 

Advertisement

ರಕ್ಷಿತಾ ಎಂಬ 20 ರ ಹರೆಯದ ವಿವಾಹಿತೆ ಆತ್ಮಹತ್ಯೆಗೆ ಯತ್ನಿಸಿದ್ದು ಚಿಂತಾಜನಕ ಸ್ಥಿತಿಯಲ್ಲಿರುವ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಮೈಸೂರಿನ ಗಂಗೋತ್ರಿ ಬಡಾವಣೆ ನಿವಾಸಿಯಾಗಿದ್ದ  ರಕ್ಷಿತಾ ಕಳೆದ ನಾಲ್ಕು ತಿಂಗಳ ಹಿಂದೆ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಉದ್ಯೋಗಿಯಾಗಿದ್ದ ಶ್ರೀನಿವಾಸ್‌ ಅವರನ್ನು ವಿವಾಹವಾಗಿದ್ದು, ಕಳೆದ ಕೆಲ ದಿನಗಳಿಂದ ಇಬ್ಬರಲ್ಲೂ ಹೊಂದಾಣಿಕೆ ಕೊರತೆಯಿಂದ ಜಗಳವಾಗುತ್ತಿತ್ತು ಎನ್ನಲಾಗಿದೆ. ಶ್ರೀನಿವಾಸ್‌ ರಕ್ಷಿತಾ ಕೊರಳಲ್ಲಿದ್ದ ತಾಳಿಯನ್ನೂ ಕಿತ್ತುಕೊಂಡಿದ್ದ ಎನ್ನಲಾಗಿದೆ. 

ಇಂದು ರಕ್ಷಿತಾ ಡಿಪೋ ಬಳಿ ರಕ್ಷಿತಾ ಬಂದಾಗ ಶ್ರೀನಿವಾಸ್‌ ಮಾತನಾಡಲಿಲ್ಲ.ಬಳಿಕ ಮನನೊಂದು ರಕ್ಷಿತಾ ಪೆಟ್ರೋಲ್‌ ಸುರಿದಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ತಿಳಿದು ಬಂದಿದೆ. 

ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿಯಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next