Advertisement

ಕುಣಿಗಲ್: ಮಳೆಯ ನೀರಿನಲ್ಲಿ ಕೊಚ್ಚಿಕೊಂಡು ಹೋದ ಯುವಕ

05:12 PM Aug 02, 2022 | Team Udayavani |

ಕುಣಿಗಲ್: ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಯುವಕನೋರ್ವ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿರುವ ಘಟನೆ ತಾಲೂಕಿನ ಹುತ್ರಿದುರ್ಗ ಹೋಬಳಿ ಶಿವಪುರ ಗ್ರಾಮದಲ್ಲಿ ನಡೆದಿದೆ.

Advertisement

ಚಿಕ್ಕನಾಯಕನಹಳ್ಳಿ ತಾಲೂಕು ಅಂದಲಗೆರೆ ಹೋಬಳಿ ಮಾದಾಪುರ ತಾಂಡ್ಯ ಗ್ರಾಮದ ನಾಗರಾಜು (28) ಮೃತ ಯುವಕ.

ಘಟನೆ ವಿವರ: ಮಾದಾಪುರ ತಾಂಡ್ಯ ಗ್ರಾಮದ  ನಾಗರಾಜು, ಗೋವಿಂದರಾಜು, ರಾಮು ಎಂಬುವರು ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹೋಬಳಿ ಶಿವಪುರ ಗ್ರಾಮಕ್ಕೆ ಚೆಕ್ ಡ್ಯಾಂಮ್ ನಿರ್ಮಾಣ ಮಾಡಲು ಬಂದಿದ್ದರು.  ಅದರ ಪಕ್ಕದಲ್ಲಿಯೇ  ಶೆಡ್ ನಿರ್ಮಿಸಿಕೊಂಡು ವಾಸವಾಗಿದ್ದರು ಎನ್ನಲಾಗಿದ್ದು, ಇದರ ಸಮೀಪ ಶಿವಪುರ ಹಾಗೂ ದೀಪಾಂಬುದಿ ಕೆರೆ ಸಂಪರ್ಕಿಸುವ ನಾಲೆ ಇತ್ತು.   ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ನಾಲೆ ತುಂಬಿ ಹರಿಯುತ್ತಿತು, ಈ ವೇಳೆ  ಮೂತ್ರ ವಿಸರ್ಜನೆಗೆಂದು ನಾಗರಾಜು ಹೊರಗಡೆ ಬಂದ ವೇಳೆಯಲ್ಲಿ ತೊರೆಯ ನೀರಿನಲ್ಲಿ  ಕೊಚ್ಚಿಕೊಂಡು ಹೋಗಿದ್ದಾನೆ. ಈ ಸಂಬಂಧ  ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next