Advertisement

ಸಿಗರೆಟ್‌ಗಾಗಿ ಜಗಳ: ಎದೆನೋವಿನಿಂದ ಯುವಕ ಸಾವು

11:37 AM Nov 15, 2022 | Team Udayavani |

ಬೆಂಗಳೂರು: ಸಿಗರೆಟ್‌ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದು ಎದೆನೋವಿನಿಂದ ಖಾಸಗಿ ಕಂಪನಿ ಮ್ಯಾನೇಜರ್‌ ಮೃತಪಟ್ಟಿದ್ದಾರೆ.

Advertisement

ಬ್ಯಾಟರಾಯನಪುರ ನಿವಾಸಿ ಸುದರ್ಶನ್‌ ರಾವ್‌ (26) ಮೃತಪಟ್ಟವರು.

ಕಸವನಹಳ್ಳಿಯ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್‌ ಆಗಿದ್ದ ಸುದರ್ಶನ್‌ ಭಾನುವಾರ ಕಚೇರಿಯ ಕಟ್ಟಡದ ಕೆಳಗಿನ ಬೇಕರಿಗೆ ಹೋಗಿ ಸಿಗರೆಟ್‌ ಕೊಡುವಂತೆ ಹೇಳಿದ್ದರು. ಬೇಕರಿ ಮಾಲೀಕ ತುರ್ತು ಕೆಲಸದ ನಿಮಿತ್ತ ಪಕ್ಕದ ಅಂಗಡಿಯವನ ಬಳಿ ಸ್ವಲ್ಪ ಬೇಕರಿ ನೋಡಿಕೊಳ್ಳುವಂತೆ ಹೇಳಿ ಹೋಗಿದ್ದರು. ಪಕ್ಕದ ಅಂಗಡಿಯ ರಾಮಚಂದ್ರ ರೆಡ್ಡಿ ಸಿಗರೆಟ್‌ ನೀಡಲು ಆಗುವುದಿಲ್ಲ. ಬೇಕರಿ ಮಾಲೀಕರು ಬಂದ ಬಳಿಕ ಬನ್ನಿ ಎಂದು ಹೇಳಿದ್ದರು. ಈ ವಿಚಾರಕ್ಕೆ ಸುದರ್ಶನ್‌ ಹಾಗೂ ರಾಮಚಂದ್ರರೆಡ್ಡಿ ನಡುವೆ ಜಗಳ ನಡೆದಿತ್ತು. ಬಳಿಕ ಸುದರ್ಶನ್‌ ಕಚೇರಿಗೆ ಹೋಗಿದ್ದರು.

ಇದಾದ ಕೆಲ ಹೊತ್ತಿನಲ್ಲಿ ಸುದರ್ಶನ್‌ ಎದೆನೋವಿನಿಂದ ಕುಸಿದು ಬಿದ್ದಿದ್ದರು. ಸಹೋದ್ಯೋಗಿಗಳು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸುದರ್ಶನ್‌ ದೇಹದ ಮೇಲೆ ಗಾಯದ ಗುರುತುಗಳಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಬೆಳ್ಳಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next