Advertisement

ಕುಂಬಳೆ: ಕೆರೆಗೆ ಬಿದ್ದು ಯುವಕ ಸಾವು

06:10 PM Sep 20, 2022 | Team Udayavani |

ಕುಂಬಳೆ: ಸಂಬಂಧಿಕರ ಮನೆಯಿಂದ ಅತಿಥಿ ಸತ್ಕಾರ ಪಡೆದು ಮರಳುತ್ತಿದ್ದಾಗ ದಾರಿ ಬದಿಯಲ್ಲಿದ್ದ ಕೆರೆಗೆ ಬಿದ್ದು ಕುಂಬಳೆ ಮಾವಿನಕಟ್ಟೆ ನಿವಾಸಿ ಕೊಡ್ಯಮ್ಮೆ ಕುಂಡಾಪು ನಿವಾಸಿ ಸೈನುದ್ದೀನ್‌ ಅವರ ಪುತ್ರ ಮೊಬೈಲ್‌ ಅಂಗಡಿ ಮಾಲಕ ಸಿನಾನ್‌ (20) ಮೃತಪಟ್ಟಿದ್ದಾರೆ.

Advertisement

ಬಂದ್ಯೋಡು ಬಳಿಯ ಚಿನ್ನಮೊಗರುನಲ್ಲಿ ಸಂಬಂಧಿಕರ ಮನೆಯಲ್ಲಿ ಅತಿಥಿ ಸತ್ಕಾರ ಏರ್ಪಡಿಸಲಾಗಿತ್ತು. ಸಿನಾನ್‌ ಹಾಗೂ ಸಹೋದರ ಸಮೀರ್‌ ತಮ್ಮ ಕಾರು ನಿಲ್ಲಿಸಿದ್ದ ಸ್ಥಳಕ್ಕೆ ಮರಳುತ್ತಿದ್ದಂತೆ ಸಿನಾನ್‌ ಆಯ ತಪ್ಪಿ ಕೆರೆಗೆ ಬಿದ್ದಿದ್ದರು. ಜತೆಗಿದ್ದ ಸಮೀರ್‌ ಕೂಡಲೇ ಕೆರೆಗೆ ಹಾರಿ ಸಹೋದರನನ್ನು ರಕ್ಷಿಸಲು ಯತ್ನಿಸಿದ್ದರು. ಅವರ ಬೊಬ್ಬೆ ಕೇಳಿ ಕಾರ್ಯಕ್ರಮದ ಮನೆಯಲ್ಲಿದ್ದವರು ಅಲ್ಲಿಗೆ ಬಂದು ಇಬ್ಬರನ್ನೂ ಮೇಲಕ್ಕೆತ್ತಿದರೂ ಸಿನಾನ್‌ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next