Advertisement

ವಿಟ್ಲ: ನೇಣು ಬಿಗಿದುಕೊಂಡು 8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

05:43 PM Jan 08, 2023 | Team Udayavani |

ವಿಟ್ಲ: ಪುಣಚ ಗ್ರಾಮದ ಮಣಿಲ ರವೀಂದ್ರ ಗೌಡರ ಪುತ್ರ ಹೇಮಂತ್(14) ರವಿವಾರ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಪುಣಚ ದೇವಿನಗರ ಶ್ರೀ ದೇವಿ ವಿದ್ಯಾಕೇಂದ್ರದ ಪ್ರೌಢಶಾಲೆಯಲ್ಲಿ 8ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಈತ ಮನೆ ಮಂದಿಯೆಲ್ಲಾ ಪುಣಚ ಮಹಿಷಮರ್ದಿನಿ ದೇವಸ್ಥಾನದಲ್ಲಿ ಅಯ್ಯಪ್ಪ ವ್ರತಧಾರಿಗಳು ಇರುಮುಡಿ ಕಟ್ಟುವ ಕಾರ್ಯಕ್ರಮಕ್ಕೆ ಹೋಗಿದ್ದ ವೇಳೆ ಹಳೆಯ ಲಂಗವನ್ನು ನೇಣು ಹಗ್ಗದಂತೆ ತಯಾರಿಸಿಕೊಂಡು ಗೋಡೆಗೆ ಬಡಿದಿದ್ದ ಕಬ್ಬಿಣದ ರಾಡ್  ಗೆ ಕುಣಿಕೆ ಹಾಕಿಕೊಂಡಿದ್ದಾನೆ.

ತರಗತಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಈತ ಬೆಳಗ್ಗೆ ಧನು ಪೂಜೆಗೆ ಹೋಗಿ ಬಂದಿದ್ದು, ನಾಳೆ ಪರೀಕ್ಷೆ ಇರುವ ಕಾರಣ ಓದಲಿದ್ದು ದೇವಸ್ಥಾನಕ್ಕೆ ಬರುವುದಿಲ್ಲ ಎಂದು ಮನೆಯಲ್ಲಿಯೇ ಉಳಿದಿದ್ದ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next