Advertisement

ಜಲಮಂಡಳಿ ನಿರ್ಲಕ್ಷ್ಯಕ್ಕೆ ಯುವಕ ದುರ್ಮರಣ

01:23 PM Mar 04, 2023 | Team Udayavani |

ಬೆಂಗಳೂರು: ಮಾರತ್ತಹಳ್ಳಿ ಪಣತ್ತೂರು ಸಮೀಪದಲ್ಲಿ ಬೆಂಗಳೂರು ಜಲಮಂಡಳಿ ನಿರ್ಲಕ್ಷ್ಯಕ್ಕೆ ಬೆಸ್ಕಾಂ ನೌಕರ ಹಾಗೂ ಯುವ ಕಲಾವಿದ ಸಾವನ್ನಪ್ಪಿದ್ದಾನೆ.

Advertisement

ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಹಾರನಹಳ್ಳಿ ಮೂಲದ ಗಿರಿನಗರದ ನಿವಾಸಿ ವಿವೇಕ್‌ ಮೌರ್ಯ (26) ಮೃತಪಟ್ಟ ಯುವಕ.

ವಿವೇಕ್‌ ಕೆಲಸ ಮುಗಿಸಿಕೊಂಡು ಶುಕ್ರವಾರ ಮಾರತ್ತಹಳ್ಳಿಯ ಪಣತ್ತೂರು ಸಮೀಪ ಬೈಕ್‌ನಲ್ಲಿ ಬರುತ್ತಿದ್ದ. ಆ ಪ್ರದೇಶದಲ್ಲಿ ಬೈಕ್‌ ನಿಯಂತ್ರಣ ಕಳೆದುಕೊಂಡು ಬಿಡಬ್ಲ್ಯುಎಸ್‌ಎಸ್‌ಬಿ ರಸ್ತೆಗೆ ಎತ್ತರವಾಗಿ ನಿರ್ಮಿಸಿಸುತ್ತಿದ್ದ ಚೇಂಬರ್‌ ಮೇಲೆ ಬೈಕ್‌ ಹತ್ತಿಸಿ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ.

ವಿವೇಕ್‌ ಮೌರ್ಯ ದೇಶ ವಿದೇಶಗಳ ಹಲವೆಡೆ ಸಂಗೀತ ಕಾರ್ಯಕ್ರಮ ನೀಡಿದ್ದ. ಬೆಸ್ಕಾಂನಲ್ಲೂ ಕೆಲಸ ಮಾಡುತ್ತಿದ್ದ ವಿವೇಕ್‌ಗೆ 9 ತಿಂಗಳ ಹಿಂದೆ ಮದುವೆಯಾಗಿತ್ತು. ಜಲಮಂಡಳಿ ನಿರ್ಲಕ್ಷ್ಯದಿಂದ ಯುವಕ ಮೃತಪಟ್ಟಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಕಳೆದ 1 ತಿಂಗಳಲ್ಲಿ ಇದೇ ಸ್ಥಳದಲ್ಲಿ ಹಲವು ಅಪಘಾತವಾಗಿದ್ದರೂ ಸಂಬಂಧಿಸಿದ ಇಲಾಖೆಗಳು ನಿರ್ಲಕ್ಷ್ಯ ವಹಿಸಿದೆ ಎಂದು ಸಾರ್ವಜನಿಕರಿಂದ ಆರೋಪ ಕೇಳಿ ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next