Advertisement

ವಾಡಿ: ಕಾಮ ದಹನದ ವೇಳೆ ಕಲಹ; ಯುವಕ ಬಲಿ

01:39 PM Mar 08, 2023 | |

ವಾಡಿ: ಹೋಳಿ ಹಬ್ಬದ ನಿಮಿತ್ತ ಕಾಮದಹನ ಸಂದರ್ಭದಲ್ಲಿ ಉಂಟಾದ ಕಲಹಕ್ಕೆ ದಲಿತ ಯುವಕ ಬಲಿಯಾದ ಘಟನೆ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ಸಂಭವಿಸಿದೆ.

Advertisement

ಲಾಡ್ಲಾಪುರ ಗ್ರಾಮದ ದಲಿತ ಕೇರಿಯ ನಿವಾಸಿ ರವಿ ಸಾಯಬಣ್ಣ ಓಚರ್ (25) ಮೃತ ಯುವಕ.

ಮಂಗಳವಾರ ರಾತ್ರಿ ಗ್ರಾಮದಲ್ಲಿ ಕಾಮದಹನ ಏರ್ಪಡಿಸಲಾಗಿತ್ತು. ಬೆಂಕಿ ಹೊತ್ತಿಸುವ ವೇಳೆ ಸಾಮೂಹಿಕ ಕುಣಿತ ನಡೆದಿದೆ. ಕಾಲ್ತುಳಿತ ಉಂಟಾಗಿ ಮೃತ ದಲಿತ ಯುವಕನ ಸಹೋದರನೊಂದಿಗೆ ಮೇಲ್ವರ್ಗದ ಕೆಲ ಯುವಕರ ನಡುವೆ ಮಾತಿನ ವಾಗ್ವಾದ ನಡೆದಿದೆ ಎನ್ನಲಾಗಿದ್ದು, ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಮಧ್ಯೆ ಪ್ರವೇಶಿಸಿ ಸಹೋದರನ ಪರ ವಾದಿಸಿದ ರವಿ ಓಚರ್, ಎದುರಾಳಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಪರಸ್ಪರ ತಳ್ಳಾಟದಲ್ಲಿ ರವಿ ನೆಲಕ್ಕೆ ಬಿದ್ದು ಆತನಿಗೆ ಪೆಟ್ಟಾದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಮಾರ್ಚ್ 9ರ 2 ಗಂಟೆ ಅವಧಿಯ ಕರ್ನಾಟಕ ಬಂದ್ ಕರೆಯನ್ನು ಹಿಂಪಡೆದ ಕಾಂಗ್ರೆಸ್

ಪ್ರಕರಣ ವಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಡಿವೈಎಸ್ಪಿ, ಸಿಪಿಐ ಹಾಗೂ ಪಿಎಸ್ಐ ಸುದರ್ಶನ್ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next