Advertisement

ಬುದ್ಧಿಮಾಂದ್ಯ ಯುವಕ ನಾಪತ್ತೆ ದೂರು ದಾಖಲು

09:53 AM Feb 14, 2022 | Team Udayavani |

ಪಿರಿಯಾಪಟ್ಟಣ: ತಾಲ್ಲೂಕಿನ ಆರ್.ಡಿ.ಕೊಪ್ಪಲು ಗ್ರಾಮದ ನಿವಾಸಿ ಕಾಂತರಾಜು (25) ನಾಪತ್ತೆಯಾಗಿದ್ದಾರೆ ಎಂದು ಪಿರಿಯಾಪಟ್ಟಣ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Advertisement

ಕಾಂತರಾಜು ಬುದ್ದಿಮಾಂದ್ಯರಾಗಿದ್ದು, ಕಳೆದ ಮೂರು ದಿನಗಳ ಹಿಂದೆ (ಫೆ.11) ಪಿರಿಯಾಪಟ್ಟಣ ತಾಲೂಕಿನ ಆರ್.ಡಿ.ಕೊಪ್ಪಲು ಗ್ರಾಮದಿಂದ ಮೈಸೂರಿನ  ಹೂಟಗಳ್ಳಿಯಲ್ಲಿ ಸಂಬಂಧಿಕರ ಮನೆಯ ಗೃಹಪ್ರವೇಶಕ್ಕೆ ತೆರಳಿದ್ದರು ಇವರು ಸಂಜೆ 4:30 ಸಮಯದಲ್ಲಿ  ಮೈಸೂರಿನಿಂದ ಊರಿಗೆ ಹೋಗುವುದಾಗಿ ಹೊರಟವರು ಈ ವರೆಗೂ ಊರಿಗೆ ಬಂದಿಲ್ಲ ಎಂದು  ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಾಂತರಾಜು 5.7 ಅಡಿ ಎತ್ತರವಿದ್ದು, ದುಂಡು ಮುಖ, ಎಣ್ಣೆಗೆಂಪು ಬಣ್ಣ, ದೃಡಕಾಯ ಮೈಕಟ್ಟು ಹೊಂದಿದ್ದು, ಮನೆಯಿಂದ ಹೊರಡುವಾಗ ಕಪ್ಪು ಪ್ಯಾಂಟ್, ನೀಲಿ ಮತ್ತು ಕಪ್ಪು ಮಶ್ರಿತ ಬಣ್ಣದ ಶರ್ಟ್ ಹಾಗೂ ನೀಲಿ ಬಣ್ಣದ ಸ್ವೆಟರ್ ಧರಿಸಿದ್ದರು ಎಂದು ಎಂದು ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next