Advertisement

ಪತ್ನಿ ತೊರೆದು ಪ್ರೇಯಸಿ ಜತೆಗಿದ್ದ ಯುವಕ ನೇಣಿಗೆ ಶರಣು  

01:10 PM Feb 20, 2023 | Team Udayavani |

ಬೆಂಗಳೂರು: ಪತ್ನಿಯನ್ನು ತೊರೆದು ಪ್ರಿಯತಮೆ ಜತೆಗೆ ಬಂದ ಯುವಕನೊಬ್ಬ ನೇಣಿಗೆ ಶರಣಾಗಿರುವ ಘಟನೆ ಜ್ಞಾನಭಾರತಿ ಠಾಣಾ ವ್ಯಾಪ್ತಿಯ ವಿಶ್ವೇಶ್ವರ ಲೇಔಟ್‌ ನಲ್ಲಿ ನಡೆದಿದೆ.

Advertisement

ಕೊಮ್ಮಘಟ್ಟದ ವೀರಭದ್ರ ನಗರದ ನಾಗೇಶ್‌ ಆತ್ಮಹತ್ಯೆ ಮಾಡಿಕೊಂಡ ಯುವಕ. 6 ವರ್ಷದ ಹಿಂದೆ ಮಧುಶ್ರೀ ಅವರನ್ನು ನಾಗೇಶ್‌ ವಿವಾಹವಾಗಿದ್ದ. ಕೊಮ್ಮಘಟ್ಟದ ವೀರಭದ್ರ ನಗರದಲ್ಲಿ ದಂಪತಿ ವಾಸಿಸುತ್ತಿದ್ದರು. ಈ ವೇಳೆ ಸಹನಾ ಎಂಬವರ ಪರಿಚಯವಾಗಿತ್ತು.ಪರಿಚಯ ಪ್ರೀತಿಗೆ ತಿರುಗಿತ್ತು. ಈ ವಿಚಾರ ತಿಳಿದ ಪತ್ನಿ ಮಧುಶ್ರೀ ಪತಿಯ ಜತೆಗೆ ಜಗಳ ಮಾಡಿದ್ದಳು.

ಇದರಿಂದ ಬೇಸತ್ತು ಹೆಂಡತಿ ಬಿಟ್ಟು ಸಹನಾಳ ಜತೆ ಫೆ.10ರಂದು ನಾಗೇಶ್‌ ಮನೆ ಬಿಟ್ಟು ಪರಾರಿಯಾಗಿದ್ದ. ನಂತರ ಮೊಬೈಲ್‌ ಸ್ವಿಚ್‌ ಆಫ್ ಮಾಡಿ ಜ್ಞಾನಭಾರತಿ ಠಾಣಾ ವ್ಯಾಪ್ತಿಯ ವಿಶ್ವೇಶ್ವರ ಲೇಔಟ್‌ನಲ್ಲಿ ವಾಸಿಸುತ್ತಿದ್ದ. ಭಾನುವಾರ ಬೆಳಗ್ಗೆ ವಿಶ್ವೇಶ್ವರ ಲೇಔಟ್‌ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next